ಸಿದ್ಧಾಪುರ: ಅಕ್ರಮ ಜಾನುವಾರು ಮಾಂಸ ಮಾಡಲು ಸಿದ್ಧತೆ – ನಾಲ್ಕು ಜಾನುವಾರುಗಳ ರಕ್ಷಣೆ
ಕುಂದಾಪುರ: ಸಿದ್ಧಾಪುರದಲ್ಲಿ ಮಾಂಸ ಮಾಡಲೆಂದು ಅಕ್ರಮವಾಗಿ ಕಟ್ಟಿ ಹಾಕಲಾಗಿದ್ದ ನಾಲ್ಕು ಜಾನುವಾರುಗಳನ್ನು ಶಂಕರನಾರಾಯಣ ಪೊಲೀಸರು ರಕ್ಷಿಸಿದ್ದು, ರವಿಚಂದ್ರನ್ ಹಾಗೂ ನಾಗರಾಜ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಿದ್ಧಾಪುರದ ಕೆಳಪೇಟೆ ಎಂಬಲ್ಲಿ ಘಟನೆ ನಡೆದಿದ್ದು, ಆರೋಪಿಗಳಾದ ರವಿಚಂದ್ರನ್ ಹಾಗೂ ಆತನ ಅಣ್ಣ ನಾಗರಾಜ ಎಂಬ ಆರೋಪಿಗಳು ನಾಲ್ಕು ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಮರಕ್ಕೆ ಕಟ್ಟಿ ಹಾಕಲಾಗಿತ್ತು. ಮಾಹಿತಿ ಪಡೆದ ಪೊಲೀಸ್ ಉಪ ನಿರೀಕ್ಷಕ ಶಂಭುಲಿಂಗಯ್ಯ ಎಮ್.ಇ ನೇತೃತ್ವದ ತಂಡ ಗುರುವಾರ ಸಂಜೆ ದಾಳಿ ನಡೆಸಿದ್ದು, ಒಂದು ನಸು ಕೆಂಪು ಮತ್ತು ಬಿಳಿ ಮಿಶ್ರಿತ ಬಣ್ಣದ ಗಂಡು, ಒಂದು ಬಿಳಿ ಬಣ್ಣದ ಗಂಡು ದನ, ಒಂದು ಕಪ್ಪು ಬಿಳಿ ಮಿಶ್ರಿತ ಗಂಡು ದನ, ಮತ್ತು ನಸು ಕೆಂಪು ಮತ್ತು ಬಿಳಿ ಮಿಶ್ರಿತ ಗಂಡು ದನವನ್ನು ರಕ್ಷಣೆ ಮಾಡಿದ್ದಾರೆ.
ಜಾನುವಾರುಗಳನ್ನು ಮಾಂಸ ಮಾಡಿ ಮಾರಾಟ ಮಾಡುವ ುದ್ಧೇಶ ಿತ್ತು ಎನ್ನುವ ಂಶ ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.