ಖಾಸಗೀ ಬಸ್ ಚಾಲಕ ನಾಪತ್ತೆ
ಕುಂದಾಪುರ: ಖಾಸಗೀ ಬಸ್ಸಿನ ಚಾಲಕನೊಬ್ಬ ನಾಪತ್ತೆಯಾಗಿದ್ದಾನೆ. ಬೈಂದೂರಿನ ಉಪ್ಪುಂದದ ನಿವಾಸಿಯಾಗಿರುವ ನಾಗರಾಜ್ ತನ್ನ ಪತ್ನಿ ಹೇಮ ಎಂಬುವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ವೃತ್ತಿಯಲ್ಲಿ ಖಾಸಗೀ ಬಸ್ ಚಾಲಕನಾಗಿದ್ದ ನಾಗರಾಜ್ ಮೇ 19ರಂದು ಕೆಲಸಕ್ಕೆ ಹೋಗಿ ಬರುವುದಾಗಿ ಹೇಳಿ ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ಬಳಿಕ ನಾಪತ್ತೆಯಾಗಿರುವುದಾಗಿ ನಾಗರಾಜ್ ಪತ್ನಿ ಹೇಮಾ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.