AccidentBlogCrime newsGovernmentHealthHighlightsHuman storiesLifestyleLocal newsObituaryOthersSportsTop StoriesTrending

ಕೊಂಕಣ ರೈಲ್ವೇ ಟ್ರ್ಯಾಕ್ ಮೆನ್ ಹೈಟ್ ಗೇಜ್ ನಿಂದ ಬಿದ್ದು ಬ್ರೈನ್ ಡೆಡ್

Aware others:

ಆನಂದನ್

ಕುಂದಾಪುರ: ಕೊಂಕಣ ರೈಲ್ವೇ ಇಲಾಖೆಯ ಸಿಬ್ಬಂದಿ, ಟ್ರ್ಯಾಕ್ ಮೇನ್ ಹೈಟ್ ಗೇಜ್ ಗೆ ಪೈಂಟ್ ಮಾಡುತ್ತಿದ್ದ ವೇಳೆ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡು ಬ್ರೈನ್ ಡೆಡ್ ಆದ ಘಟನೆ ಸೋಮವಾರ ಮಧ್ಯಾಹ್ನ ಕುಂದಾಪುರ ರೈಲ್ವೇ ಸ್ಟೇಷನ್ ನಲ್ಲಿ ನಡೆದಿದೆ. ಬೈಂದೂರು ತಾಲೂಕಿನ ಬಿಜೂರು ನಿವಾಸಿ ಆನಂದನ್ (43) ಎಂಬುವರೇ ಬ್ರೈನ್ ಡೆಡ್ ಆಗಿ ಮಣಿಪಾಲ ಖಾಸಗೀ ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿದ್ದಾರೆ.

ಬಿಜೂರು ನಿವಾಸಿ ಆನಂದನ್ ಕಳೆದ ಹತ್ತು ವರ್ಷಗಳಿಂದ ಕೊಂಕಣ ರೈಲ್ವೇ ಇಲಾಖೆಯಲ್ಲಿ ಟ್ರ್ಯಾಕ್ ಮೇನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೋಮವಾರ ಕುಂದಾಪುರದ ರೈಲ್ವೇ ಸ್ಟೇಷನ್ ನಲ್ಲಿ ಹೈಟ್ ಗೇಜ್ ಗೆ ಪೈಂಟ್ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಫ್ಲಾಟ್ ಫಾರ್ಮ್ ಮೇಲೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆ ಒಡೆದು ಹೋಗಿದ್ದು, ತಕ್ಷಣ ಮಣಿಪಾಲ ಆಸ್ಪತ್ರೆಗೆ ಸಿಬ್ಬಂದಿಗಳ ಸಹಾಯದಿಂದ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ಆನಂದನ್ ಅವರ ಮೆದುಳು ನಿಷ್ಕ್ರಿಯವಾಗಿದೆ ಎಂದು ದೃಢಪಡಿಸಿದ್ದಾರೆ ಎನ್ನಲಾಗಿದೆ. ಆದರೆ ಸ್ಪಷ್ಟವಾದ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

ಆನಂದನ್ ಉತ್ತಮ ಸ್ಪೋರ್ಟ್ಸ್ ಮ್ಯಾನ್ ಕೂಡಾ ಆಗಿದ್ದು, ಕ್ರಿಕೆಟ್ ನಲ್ಲಿ ಹಲವಾರು ಟ್ರೋಪಿಗಳನ್ನು ತನ್ನದಾಗಿಸಿಕೊಂಡಿದ್ದರು. ಸದಾ ಕ್ರಿಯಾಶೀಲವಾಗಿದ್ದ ಆನಂದನ್ ಸ್ಥಳೀಯವಾಗಿ ಸಮಾಜಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದರು. ಆನಂದನ್ ಅವರ ಪತ್ನಿ ನಾಗಶ್ರೀ ಪೂಜಾರಿ ಅವರು ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ ಅವರು ಇತ್ತೀಚೆಗಷ್ಟೇ ಕುಂದಾಪುರ ಠಾಣೆಗೆ ವರ್ಗವಾಗಿದ್ದರು. ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಆನಂದನ್ ದಂಪತಿಗಳು ನೂತನವಾಗಿ ಮನೆಯೊಂದನ್ನು ನಿರ್ಮಿಸಿದ್ದು, ಏಪ್ರಿಲ್ ಕೊನೆಯಲ್ಲಿ ಗೃಹಪ್ರವೇಶಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ ವಿಧಿಯಾಟವೇ ಬೇರೆಯಾಗಿದ್ದು, ಆನಂದನ್ ಸಾವು ಕುಟುಂಬಕ್ಕೆ ಅಪಾರ ದುಃಖ ತಂದಿದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

2 thoughts on “ಕೊಂಕಣ ರೈಲ್ವೇ ಟ್ರ್ಯಾಕ್ ಮೆನ್ ಹೈಟ್ ಗೇಜ್ ನಿಂದ ಬಿದ್ದು ಬ್ರೈನ್ ಡೆಡ್

  • ಏನ್ ಹೇಳಲಿ ವಿಧಿಯ ಬರಹ ಯಾರು ಅರಿಯರು ಒಂದೇ ಹೇಳಬಲ್ಲೆ ಆನಂದರವಾರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥನೆ ಮಾಡಬಹುದು 🌹🌹🙏

    Reply
  • Contact number enadru sigbahuda

    Reply

Leave a Reply

Your email address will not be published. Required fields are marked *

error: Content is protected !!