BlogEntertainmentFashionHighlightsHuman storiesLifestyleLocal newsOthersPoliticsTop StoriesTrending

ಗಾಂಧೀಜಿ ಸತ್ಯ, ಶಾಂತಿ, ಅಹಿಂಸೆಯ ಮಹಾನ್ ಪ್ರತಿಪಾದಕ – ಶಂಕರ್ ಎ ಕುಂದರ್

Aware others:

ಕುಂದಾಪುರ: ಅಹಿಂಸೆಯ ದಾರಿಯಲ್ಲಿ ಸಾಗಿ, ಅವಿರತವಾಗಿ ಹೋರಾಟ ನಡೆಸಿ ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿಸುವ ಮೂಲಕ ಸತ್ಯ ಶಾಂತಿ ಅಹಿಂಸೆಯೇ ಯಶಸ್ಸಿನ ಮೂಲಮಂತ್ರ ವೆಂದು ಜಗತ್ತಿಗೆ ತೋರಿಸಿಕೊಟ್ಟ ಮಹಾತ್ಮ ಗಾಂಧೀಜಿ ಮಹಾನ್ ಅಹಿಂಸಾ ಪ್ರತಿಪಾದಕ ಎಂದು ಶಂಕರ್ ಎ ಕುಂದರ್ ಹೇಳಿದರು.

ಗುರುವಾರ ಕೋಟ ಬ್ಲಾಕ್ ಕಾಂಗ್ರೆಸ್ ನ “ಇಂದಿರಾ ಭವನದಲ್ಲಿ” ನಡೆದ ಗಾಂಧೀ ಜಯಂತಿ ಮತ್ತು ಮಾಜಿ ಪ್ರಧಾನಿ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರೀ ಜನ್ಮ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಎಲ್ಲ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿ ಪುಷ್ಪಾಚರಣೆ ಸಲ್ಲಿಸಲಾಯಿತು. ಹಿರಿಯ ಕಾಂಗ್ರೆಸ್ ಮುಖಂಡ ಬಸವ ಪೂಜಾರಿ ಗುಂಡ್ಮಿ,  ಸಾಲಿಗ್ರಾಮ ಪಟ್ಟಣ ಪಂಚಾಯತ್ ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರಾದ ಶ್ರೀನಿವಾಸ್ ಅಮೀನ್, ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್ ನ ಸಂಘಟನಾ ಕಾರ್ಯದರ್ಶಿ ಶೇಖರ್ ಪಿ ಮರಕಾಲ, ಸಾಲಿಗ್ರಾಮ ಪಟ್ಟಣ ಪಂಚಾಯತ್ ನ ಮಾಜಿ ಸದಸ್ಯರಾದ ಅಚ್ಚುತ್ ಪೂಜಾರಿ ಹಾಗೂ ಮಹಾಬಲ ಮಡಿವಾಳ,  ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಜಿತ್ ಶೆಟ್ಟಿ ವಡ್ಡರ್ಸೆ, ಪಾಂಡೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೈ. ಬಿ ರಾಘವೇಂದ್ರ, ಕುಂದಾಪುರ ವಿಧಾನಸಭಾ ಕ್ಷೇತ್ರದ ಅಕ್ರಮ- ಸಕ್ರಮ ಸದಸ್ಯರಾದ  ರಾಜೇಶ್ ನೆಲ್ಲಿಬೆಟ್ಟು, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ವಿನಯ್ ಕುಮಾರ್ ಕಬ್ಯಾಡಿ, ರತ್ನಾಕರ ಪೂಜಾರಿ ಪಾರಂಪಳ್ಳಿ, ರಮೇಶ್ ಮೆಂಡನ್ ಬಡಹೋಳಿ, ಯಾಶಿನ್ ಪಡುಕೆರೆ, ಸಚಿನ್ ಶೆಟ್ಟಿ ವಡ್ಡರ್ಸೆ, ನಾಗೇಶ್ ಪೂಜಾರಿ ಪಡುಕೆರೆ, ಸುರೇಶ್ ನೆಲ್ಲಿಬೆಟ್ಟು, ಗಿರೀಶ್ ತೋಡ್ಕಟ್ಟು, ರಮೇಶ್ ಮೂಡ್ಹೋಳಿ, ಮಂಜುನಾಥ್ ಪೂಜಾರಿ ಗುಂಡ್ಮಿ, ಹಾರುನ್ ಸಾಹೇಬ್  ಗುಂಡ್ಮಿ, ರಾಜು ಪೂಜಾರಿ ತೋಡ್ಕಟ್ಟು ಉಪಸ್ಥಿತರಿದ್ದರು. ಸಾಲಿಗ್ರಾಮ ಪಟ್ಟಣ ಪಂಚಾಯತ್  ಸದಸ್ಯರು  ಹಾಗೂ ಕೋಟ ವ್ಯವಸಾಯಕ ಬ್ಯಾಂಕ್ ನ ನಿರ್ದೇಶಕ ರವೀಂದ್ರ ಕಾಮತ್ ಗುಂಡ್ಮಿ ಸ್ವಾಗತಿಸಿ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!