ಮಂದಾರ್ತಿ: ಬಿಲ್ಲಾಡಿ ದಸರಾ ಮಹೋತ್ಸವದ ಲಾಂಛನ ಬಿಡುಗಡೆ ಮಾಡಿದ ಶಾಸಕ ಎ.ಕಿರಣ್ ಕೊಡ್ಗಿ
ಕುಂದಾಪುರ: ಸಾರ್ವಜನಿಕ ಶಾರದೋತ್ಸವ ಸಮಿತಿ ಬಿಲ್ಲಾಡಿ ಹಾಗೂ ಬಿಲ್ಲಾಡಿ ಪ್ರೆಂಡ್ಸ್ ಯುವ ವೇದಿಕೆ ನೇತ್ರತ್ವದಲ್ಲಿ ಸಪ್ಟೆಂಬರ್ 27,28 ರಂದು ನಡೆಯುವ ಭಕ್ತಿ ಭಾವ ಬಣ್ಣಗಳ ವೈಭವ ಬಿಲ್ಲಾಡಿ – ದಸರಾ -2025 ಕಾರ್ಯಕ್ರಮದ ಲಾಂಛನವನ್ನು ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರು ತಮ್ಮ ಸ್ವಗೃಹದಲ್ಲಿ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು, ಸುಮಾರು 9 ವರ್ಷಗಳಿಂದ ಬಿಲ್ಲಾಡಿಯಲ್ಲಿ ಯುವಕ -ಯುವತಿಯರು ಊರಿನ ಹಿರಿಯೊಂದಿಗೆ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿರುವ ಬಿಲ್ಲಾಡಿ-ದಸರಾ ಊರ ಹಬ್ಬವಾಗಿ ವೈಭಯುತವಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಬಿಲ್ಲಾಡಿ ದಸರಾ ಸ್ಥಾಪಕ ಸಂಚಾಲಕ ಪೃಥ್ವೀರಾಜ್ ಶೆಟ್ಟಿ ಬಿಲ್ಲಾಡಿ, ದಸರಾ 2025 ರ ಅದ್ಯಕ್ಷ ಚಂದ್ರಕಾಂತ ಕೊಠಾರಿ, ಯುವ ಉದ್ಯಮಿ ಪ್ರಿಯದರ್ಶಿನ್ ಶೆಟ್ಟಿ ಬಿಲ್ಲಾಡಿ, ರಾಘವ್ ಮೆಂಡನ್ ಬಿಲ್ಲಾಡಿ ಬಿಲ್ಲಾಡಿ ಫ್ರೆಂಡ್ಸ್ ಅಧ್ಯಕ್ಷ,, ಪ್ರತಾಪ್ ಶೆಟ್ಟಿ ಅರಾಡಿ ಉಪಸ್ಥಿತರಿದ್ದರು.