ಕುಂದಾಪುರ|ಬೈಂದೂರು: ಇಂದು ಮತ್ತು ನಾಳೆ ಭಾರತೀಯ ಅಂಚೆ ಸೇವೆ ಸ್ಥಗಿತ!?
ಕುಂದಾಪುರ: ಜನಸೇವೆಗೆ ಅತ್ಯಂತ ನಿಷ್ಠ ಮತ್ತು ಪ್ರಾಮಾಣಿಕ ಎಂದು ಖ್ಯಾತಿ ಗಳಿಸಿರುವ ಭಾರತೀಯ ಅಂಚೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಭಾರತೀಯ ಅಂಚೆ ಸೇವೆಯ ಸರ್ವರ್ ಅಪ್ ಡೇಟ್ ಪ್ರೊಸೆಸ್ಸಿಂಗ್ ನಡೆಯುತ್ತಿದ್ದು, ಇಂದು ಮತ್ತು ನಾಳೆ ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಅಂಚೆ ಸೇವೆಗಳು ಸ್ಥಗಿತಗೊಂಡಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಕಳೆದ ಎರಡು ದಿನಗಳಿಂದ ಉಡುಪಿ ಮೊದಲಾದೆಡೆಗಳಲ್ಲಿ ಅಂಚೆ ಸೇವೆ ಸ್ಥಗಿಗೊಂಡಿತ್ತು. ನೀವು ಯಾವುದೇ ರೀತಿ ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್ ಅಥವಾ ಇನ್ಯಾವುದೇ ರೀತಿಯ ಅಂಚೆ ಸೇವೆಗಳನ್ನು ಪಡೆಯಬೇಕಾದರೆ ಎರಡು ದಿನಗಳ ತನಕ ಕಾಯಲೇ ಬೇಕು ಅಥವಾ ಉಡುಪಿಯಲ್ಲಿ ಅಂಚೆ ಸೇವೆಗಳನ್ನು ಪಡೆಯಬಹುದು. ಎರಡು ದಿನಗಳ ಬಳಿಕ ಮಚೆ ಸೇವೆ ಎಂದುನಂತೆ ಗ್ರಾಹಕರಿಗೆ ದೊರಕಲಿದೆ ಎಂದು ತಿಳಿದು ಬಂದಿದೆ.
