BlogCrime newsGovernmentHighlightsHuman storiesLifestyleLocal newsOthersState newsSuccess storiesTop StoriesTrending

ಶಿರೂರು: ಮಾಂಸಕ್ಕಾಗಿ ಕಟ್ಟಿಹಾಕಿದ್ದ ನಾಲ್ಕು ಎತ್ತುಗಳ ಸಹಿತ ಆರೋಪಿಯ ಬಂಧನ

Aware others:

ಕುಂದಾಪುರ: ಮಾಂಸ ಮಾರಾಟಕ್ಕಾಗಿ ಅಕ್ರಮವಾಗಿ ನಾಲ್ಕು ಎತ್ತುಗಳನ್ನು ತಂದು ಕಟ್ಟಿ ಹಾಕಿದ ಆರೋಪದಲ್ಲಿ ಒಬ್ಬನನ್ನು ಬೈಂದೂರು ಪೊಲೀಸರು ಬಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿರೂರು ಗ್ರಾಮದ ಕೆಳಪೇಟೆ ಉಸ್ಮಾನಿಯ ಮೊಹಲ್ಲಾ ನಿವಾಸಿ ಮಹಮ್ಮದ್ ಸಾಜೀದ್ ಎಂದು ಗುರುತಿಸಲಾಗಿದೆ. ಕಟ್ಟಿಹಾಕಲಾಗಿದ್ದ  4 ಎತ್ತುಗಳನ್ನು ಪೊಲೀಸರು ವಶಕ್ಕೆ ಪಡೆದು ರಕ್ಷಿಸಿದ್ದಾರೆ.

ಸೋಮವಾರ ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೆಳಪೇಟೆ ಉಸ್ಮಾನಿಯ ಮೊಹಲ್ಲಾದಲ್ಲಿ ಮಹಮ್ಮದ್ ಸಾಜೀದ್ ಎಂಬಾತನು ಯಾವುದೇ ಪರವಾನಿಗೆ ಇಲ್ಲದೇ ಮಾಂಸ ಮಾಡಿ ಮಾರಾಟ ಮಾಡಲು 4 ಎತ್ತುಗಳನ್ನು ಅಕ್ರಮವಾಗಿ ತಂದು ಕಟ್ಟಿ ಹಾಕಿರುವ ಬಗ್ಗೆ ಪೊಲೀಸರಿಗೆ ದೊರೆತ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ಈ ಸಂದರ್ಭ ಸ್ಥಳದಲ್ಲಿದ್ದ ಆರೋಪಿ ಸಾಜಿದ್ ನನ್ನು ಬಂಧಿಸಿದ್ದು, ಜಾನುವಾರುಗಳನ್ನು ರಕ್ಷಣೆ ಮಾಡಲಾಗಿದೆ. ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!