ಬಾವಿಗೆ ಬಿದ್ದ ಪೈಪ್ ಎತ್ತಲು ಬಾವಿಗಿಳಿದ ವ್ಯಕ್ತಿ ಸಾವು
ಕುಂದಾಪುರ: ಬಾವಿಗೆ ಬಿದ್ದಿದ್ದ ಪೈಪನ್ನು ಮೇಲಕ್ಕೆತ್ತಲೆಂದು ಬಾವುಇಗಿಳಿದು ಮೇಲೆ ಬರುತ್ತಿದ್ದ ಸಂದರ್ಭ ಬಾವಿಗೆ ಬಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ಕೋಟೇಶ್ವರ ಸಮೀಪ ಮೂಡುಗೋಪಾಡಿಯಲ್ಲಿ ನಡೆದಿದೆ. ಬಳ್ಳೂರು ಗ್ರಾಮದ ಸುಭಾಷ್ (50) ಅವರು ಮೃತಪಟ್ಟವರು.

ಸುಭಾಷ್ ಅವರು ಅಣ್ಣ ಸುರೇಂದ್ರ ಜೊತೆ ಗೋಪಾಡಿ ಗ್ರಾಮದ ಮೂಡುಗೋಪಾಡಿಯಲ್ಲಿ ಬಾವಿ ತೋಡುವ ಕೆಲಸಕ್ಕೆ ಹೋಗುತ್ತಿದ್ದರು. ಬಾವಿಯ ರಿಂಗ್ ಬದಿಯಲ್ಲಿ ಜಲ್ಲಿ ಕಲ್ಲುಗಳನ್ನು ಹಾಕಲು ಅಳವಡಿಸಿದ ಪಿವಿಸಿ ಪೈಪ್ ಬಾವಿಗೆ ಬಿದ್ದಿದ್ದು, ಅದನ್ನು ತೆಗೆಯಲೆಂದು ಅವರು ಇಳಿದಿದ್ದರು. ಹಗ್ಗದ ಸಹಾಯದಿಂದ ಮೇಲೇರುತ್ತಿರುವಾಗ ಆಕಸ್ಮಿಕವಾಗಿ ಹಗ್ಗದಿಂದ ಕೈ ಜಾರಿ ಮತ್ತೆ ಬಾವಿಗೆ ಬಿದ್ದರು. ದುರ್ಘಟನೆಯಲ್ಲಿ ಸುಭಾಷ್ ಸಾವನ್ನಪ್ಪಿದ್ದಾರೆ ಎಂದು ಅವರ ಪುತ್ರ ಅಭಿಷೇಕ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.