ಶಿರಿಯಾರ: ಕಿತ್ತೆದ್ದು ಹೋದ ಶಿರಿಯಾರ ಗುಡ್ಡಟ್ಟು ಗುಡ್ಡೆಅಂಗಡಿ ರಸ್ತೆ – ಗ್ರಾಮಸ್ಥರ ಆಕ್ರೋಶ
ಕುಂದಾಪುರ: ಸಂಚಾರಕ್ಕೆ ಅನುಕೂಲ ಕಲ್ಪಿಸುವ ರಸ್ತೆ ಅಗಲೀಕರಣ ಕಾಮಗಾರಿ ಅವೈಜ್ಞಾನಿಕವಾಗಿ ಆರಂಭಗೊಂಡ ಪರಿಣಾಮ ಈಗ ಪ್ರಯಾಣಿಕರಿಗೆ ಕಂಟಕ ತಂದೊಡ್ಡುವ ಸ್ಥಿತಿ ನಿರ್ಮಾಣವಾಗಿದೆ. ಶಿರಿಯಾರ – ಗುಡ್ಡಟ್ಟು – ಗುಡ್ಡೆಅಂಗಡಿ ರಸ್ತೆಯ ಅಗಲೀಕರಣದಿಂದಾಗಿ ರಸ್ತೆಯ ಇಕ್ಕೆಲಗಳಲ್ಲಿ ಹಾಕಲಾದ ಮಣ್ಣು ಮಳೆ ನೀರಿಗೆ ಕೆಸರುಗದ್ದೆಯಾಗಿದ್ದು, ಪ್ರಯಾಣಿಕರ ಪಾಲಿಗೆ ಮರಣ ಮೃದಂಗ ಬಾರಿಸುತ್ತಿದೆ.

ಅಲ್ಲದೇ ಈ ರಸ್ತೆಯ ಮೂರು ಕಡೆಗಳಲ್ಲಿ ಮೋರಿ ನಿರ್ಮಾಣಕ್ಕೆಂದು ರಸ್ತೆಗಳನ್ನು ಅಗೆಯಲಾಗಿದ್ದು, ತೆಗದು ಹಾಕಿದ ಮಣ್ಣು ಪಾಯ ಆಹ್ವಾನಿಸುತ್ತಿದೆ. ಅಲ್ಲದೇ ಕಾಮಗಾರಿ ನಡೆಯುತ್ತಿರುವ ಬಗ್ಗೆ ಪ್ರಯಾಣಿಕರಿಗೆ ಯಾವುದೇ ಸೂಚನಾ ಫಲಕವನ್ನೂ ಅಳವಡಿಸದೇ ಇರುವುದರಿಂದ ವೇಗವಾಗಿ ಬರುವ ವಾಹನಗಳು ಸ್ಕಿಡ್ ಆಗಿ ಪಲ್ಟಿಯಾಗುವ ಆತಂಕ ಎದುರಾಗಿದೆ.


ಸಂಬಂದಪಟ್ಟ ಇಲಾಖೆ ಹಾಗೂ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರು ಗಮನಹರಿಸಿ ಈ ಕೂಡಲೇ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂಬುದಾಗಿ ಗುಡ್ಡಟ್ಟು ನಿವಾಸಿ ರವಿ ಮೊಗವೀರ ಾಗ್ರಹಿಸಿದ್ದಾರೆ.