ಉಡುಪಿ: ಜೇಸಿಐ ರಾಷ್ಟ್ರೀಯ ನಿರ್ದೇಶಕ ಹುಸೈನ್ ಹೈಕಾಡಿಗೆ ಸನ್ಮಾನ
ಉಡುಪಿ: ಇಲ್ಲಿನ ಒಷಿಯನ್ ಪರ್ಲ್ ಹೊಟೇಲ್ ನಲ್ಲಿ ನಡೆದ ಜೆ.ಸಿ.ಐ ಉಡುಪಿ ಕೋಸ್ಟಲ್ ಪದ ಪ್ರದಾನ ಸಮಾರಂಭದಲ್ಲಿ ಕುಂದಾಪುರ ಸಿಟಿ ಜೇಸಿಐ ಸ್ಥಾಪಕಾಧ್ಯಕ್ಷ, ರಾಷ್ಟ್ರೀಯ ನಿರ್ದೇಶಕ ಕುಂದಾಪುರದ ಹುಸೈನ್ ಹೈಕಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನಿಸಿ ಗೌರವಿಸಿದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ರಾಷ್ಟ್ರೀಯ ಅಧ್ಯಕ್ಷ ಸೀನಿಯರ್ ಪಿಪಿಫ್ ಎಮ್ ಆರ್ ಜಯೇಷಾ ಅವರು, ಹುಸೈನ್ ಹೈಕಾಡಿಯವರು ಜೆಸಿಐ ಮೂಲಕ ನೂರಾರು ಜೇಸಿಗಳನ್ನು ಸೃಷ್ಟಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ ಎಂದರು.
ರಾಷ್ಟ್ರೀಯ ಉಪಾಧ್ಯಕ್ಷ ಸೀನಿಯರ್ ಸುರೇಖಾ ಮುರಳೀಧರನ್, ರಾಷ್ಟ್ರೀಯ ಸಂಯೋಜಕಿ ಬಿಂದು ತಂಕಪ್ಪನ್, ಸಮಾಜ ಸೇವಕ ಕೃಷ್ಣ ಮೂರ್ತಿ ಆಚಾರ್ಯ ಉಡುಪಿ, ಜೆಸಿಐ ಇದರ ಅಧ್ಯಕ್ಷೆ ಝಿನತ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಗೀತಾ ರಾವ್ ಮೊದಲಾದವರು ಉಪಸ್ಥಿತರಿದ್ದರು.