BlogGovernmentHighlightsHuman storiesLifestyleLocal newsNational NewsObituaryOthersPoliticsProtestState newsTop StoriesTrendingWomen Care

ಪೆಹಲ್ಗಾಮ್ ನಲ್ಲಿ ಉಗ್ರರ ಗುಂಡಿನ ದಾಳಿ ಖಂಡನೀಯ – ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ

Aware others:

ಕುಂದಾಪುರ: ಭಾರತದ ಅತ್ಯಂತ ರಮಣೀಯ ಪ್ರದೇಶವಾಗಿರುವ ಕಾಶ್ಮೀರದ ಪೆಹಲ್ಗಾಮ್ ನ ಬೈಸರನ್ ಹುಲ್ಲುಗಾವಲಿನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು  ಗುಂಡಿನ ದಾಳಿ ನಡೆಸಿ 28 ಜನರನ್ನು ಹತ್ಯೆಗೈದಿರುವುದು ಖಂಡನೀಯ ದುಷ್ಕೃತ್ಯ ಎಂದು ಬೈಂದೂರು ವಿಧಾನಸಭಾ ಕ್ಷೇತ್ರದ ಮಾಜೀ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದ್ದಾರೆ.

ಗೋಪಾಲ ಪೂಜಾರಿ ಏನು ಹೇಳಿದ್ದಾರೆ? ಕೇಳಿ

ಘಟನೆಯ ಬಳಿಕ ದೇಶದೊಳಗೆ ಆತಂಕದ ಸ್ಥಿತಿ ಎದುರಾಗಿದ್ದು, ಕೇಂದ್ರ ಸರ್ಕಾರ ತಕ್ಷಣ ಗಡಿ ಪ್ರದೇಶಗಳಲ್ಲಿ ಹಾಗೂ ಪ್ರವಾಸೀ ತಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದ ಅವರು, ಭಯೋತ್ಪಾದನಾ ಕೃತ್ಯ ನಡೆಸಿದವರು ಹಾಗೂ ಅವರ ಬೆಂಬಲಕ್ಕೆ ನಿಂತಹವರನ್ನು ಪತ್ತೆ ಹಚ್ಚಿ ಧಮನಿಸುವಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಕಾಶ್ಮೀರದಲ್ಲಿ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಸಾವಿರಾರು ಕುಟುಂಬಗಳು ಈಗ ಅತಂತ್ರ ಸ್ಥಿತಿಯನ್ನು ಎದುರಿಸುತ್ತಿವೆ. ಅವರಿಗೆ ಧೈರ್ಯ ತುಂಬುವುದರ ಜೊತೆಗೆ ಸ್ಥಳೀಯರ ಹಾಗೂ ಪ್ರವಾಸಿಗರ ಭದ್ರತೆಗಾಗಿ ಹೆಚ್ಚಿನ ವ್ಯವಸ್ಥೆ ಮಾಡಬೇಕು ಎಂದವರು ಹೇಳಿದರು.


Aware others:

Leave a Reply

Your email address will not be published. Required fields are marked *

error: Content is protected !!