BlogEconomyEntertainmentFashionHighlightsHuman storiesLifestyleLocal newsOthersState newsSuccess storiesTop StoriesTrending

ಕುಂದಾಪುರ: ನಮ್ಮ ನಾಡ ಒಕ್ಕೂಟದಿಂದ ನಮ್ಮ ನಡೆ ಕೃಷಿಯ ಕಡೆ ವಿನೂತನ ಅಭಿಯಾನ

Aware others:

ಕುಂದಾಪುರ : ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇವರ ನಮ್ಮ ನಡೆ ಕೃಷಿಯ ಕಡೆ ಎನ್ನುವ ವಿನೂತನ ಅಭಿಯಾನ ಏಪ್ರಿಲ್ 15ರ ಮಂಗಳವಾರ ಸಂಜೆ 5 ಗಂಟೆಗೆ ಕುಂದಾಪುರದ ಗಾಂಧಿ ಮೈದಾನದಲ್ಲಿ ಜರುಗಿತು.

ಈ ಕಾರ್ಯಕ್ರಮದಡಿಯಲ್ಲಿ ತಾನು ಬೆಳೆಸಿದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಅದನ್ನು ಬೇರೆ ಬೇರೆ ಕಡೆಗಳಲ್ಲಿ ತೆಗೆದುಕೊಂಡು ಹೋಗಿ ಮಾರಿ ಜೀವನ ನಡೆಸುತ್ತಿರುವ ಕೃಷಿಕರಿಗೆ ಸಹಕಾರ ನೀಡಲಾಗುತ್ತದೆ. ತನ್ನ ಹೊಲದಲ್ಲಿ ಕಲ್ಲಂಗಡಿ ಬೆಳೆಸಿ ಅದನ್ನು ತಂದು ತಾವೇ ಮಾರಾಟ ಮಾಡುತ್ತಿರುವ ಕೃಷಿಕ ಐನೂರಿನ ಮೊಹಮ್ಮದ್ ಗೌಸ್ ರವರನ್ನು ಕೃಷಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ನಮ್ಮ ನಾಡು ಒಕ್ಕೂಟ  ಕಮ್ಯುನಿಟಿ ಸೆಂಟರ್ ನ ಕೇಂದ್ರ ಸಮಿತಿ ಸಂಘಟನ ಕಾರ್ಯದರ್ಶಿ ಹುಸೇನ್ ಹೈಕಾಡಿ ಮಾತನಾಡಿ, ಕೃಷಿಗೆ ಉತ್ತೇಜನ ನೀಡುವುದು, ಅವರನ್ನು ಗುರುತಿಸಿ ಗೌರವಿಸುವುದು ಹಾಗೂ ಅವರಿಂದ ಕಲ್ಲಂಗಡಿ ಖರೀದಿಸಿ, ಬೇರೆಯವರಿಗೆ ಉಚಿತವಾಗಿ ನೀಡಿ ಅವರ ಕೃಷಿಗೆ ಹಾಗೂ ವ್ಯಾಪಾರಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವೇ ಕೃಷಿ ಕಡೆಗೆ ನಮ್ಮ ನಡೆ ಅಭಿಯಾನ ಎಂದರು.

ಕಾರ್ಯಕ್ರಮದಲ್ಲಿ  ನಮ್ಮ ನಾಡು ಒಕ್ಕೂಟ  ಕಮ್ಯುನಿಟಿ ಸೆಂಟರ್ ನ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ, ಕೇಂದ್ರ ಸಮಿತಿಯ ಖಜಾಂಚಿ ಪೀರ್ ಸಾಹೇಬ್ ಉಡುಪಿ,  ಜಿಲ್ಲಾ ಉಪಾಧ್ಯಕ್ಷ ಅಬು ಮೊಹಮ್ಮದ್ ಕುಂದಾಪುರ, ಜಿಲ್ಲಾ ಪ್ರದಾನ ಕಾರ್ಯದರ್ಶಿ  ಝಹಿರ್ ಅಹ್ಮದ್ ಗಂಗೊಳ್ಳಿ, ಸದಸ್ಯ ಅಕ್ರಮ್ ಉಡುಪಿ  ಸ್ಥಳೀಯರಾದ ಮೊಹಮ್ಮದ್ ಝುಹೇರ್ ಗಂಗೊಳ್ಳಿ, ರಮೇಶ್ ಗಂಗೊಳ್ಳಿ  ಗೋಪಾಲ್, ಗಣೇಶ್ ಇನ್ನಿತರರು ಉಪಸ್ಥಿತರಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!