BlogGovernmentHighlightsHuman storiesLifestyleLocal newsOthersPoliticsProtestTop StoriesTrendingWomen Care

ಕುಂದಾಪುರ: ಬೈಂದೂರು ಶಾಸಕ ಗಂಟಿಹೊಳೆ ಆಹೋ ರಾತ್ರಿ ಧರಣಿ ಶರತ್ತಿನೊಂದಿಗೆ ಅಂತ್ಯ

Aware others:

ಕುಂದಾಪುರ: ಏಪ್ರಿಲ್ 8ರಂದು ಮಂಗಳವಾರ ಹಿಂದೂ ವಿದ್ಯಾರ್ಥಿನಿಯೊಬ್ಬಳ ಜೊತೆ ಮುಸ್ಲಿಂ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಪ್ರಶ್ನಿಸಿದಾತನ ವಿರುದ್ಧವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ಆರೋಪಿಸಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಗೂ ಹಿಂದೂ ಕಾರ್ಯಕರ್ತರು ಕುಂದಾಪುರ ಪೊಲೀಸ್ ಠಾಣೆಯ ಎದುರು ಆಹೋರಾತ್ರಿ ಧರಣಿ ಶರತ್ತಿನೊಂದಿಗೆ ಶುಕ್ರವಾರ ಬೆಳಿಗ್ಗೆ ಅಂತ್ಯಗೊಂಡಿದೆ. 

ಪೋಲಿಸ್ ಇಲಾಖೆ ವಕೀಲರು ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಜೊತೆಗೆ ನಡೆದ ಮಾತುಕತೆಯ ಬಳಿಕ ಶಾಸಕ ಗುರುರಾಜ ಗಂಟಿಹೊಳೆ ಆಹೋರಾತ್ರಿ ಧರಣಿಗೆ ತಾರ್ಕಿಕ ಅಂತ್ಯ ನೀಡಿದ್ದಾರೆ.

ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಮಹೇಶ್ ಅವರ ಮೇಲಿನ ಪ್ರಕರಣವನ್ನು ವಾಪಸ್ಸು ಪಡೆಯುವುದು, ಯುವತಿಯ ತಾಯಿ ನೀಡಿದ ಎರಡನೇ ದೂರಿನಂತೆ ತಪ್ಪಿತಸ್ಥ ಮುಸ್ಲಿಂ ಯುವಕರ ವಿರುದ್ಧ ಕ್ರಮ ಜರುಗಿಸುವುದು ಚರ್ಚೆಯಲ್ಲಿ ಬಂದ ಅಂಶಗಳು. ಈ ಬಗ್ಗೆ ಪೊಲೀಸರು ಮೂರು ದಿನಗಳ ಕಾಲಾವಕಾಶ ಕೋರಿ ಪ್ರತಿಭಟನೆಯನ್ನು ಹಿಂಪಡೆಯುವಂತೆ ಮನವಿ ಮಾಡಿದರು. 

ಅದರಂತೆ ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಕಾರ್ಯಕರ್ತರು ಆಹೋರಾತ್ರಿ ಧರಣಿಯನ್ನು ಹಿಂತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!