BlogCulturalEconomyEntertainmentFashionHighlightsHuman storiesLifestyleLocal newsNational NewsNatureOthersPoliticsState newsSuccess storiesTechTop StoriesTrendingWomen Care

ಪೊಂಗಲ್ ಸಂಭ್ರಮಕ್ಕೆ ದಳಪತಿ ಗಿಫ್ಟ್! ಜನನಾಯಕನ್ ಮೂಲಕ ಅಶ್ವಮೇಧಕ್ಕೆ ಹೊರಟಿದ್ದಾರೆ ದಳಪತಿ ವಿಜಯ್!!

Aware others:

ಚೆನ್ನೈ: ರಾಜಕಾರಣಿಯಾಗಲು ಹೊರಟಿರುವ ಜನನಾಯಕ ದಳಪತಿ ವಿಜಯ್ ಮುಂದಿನ ವರ್ಷದ ಪೊಂಗಲ್ ಹಬ್ಬಕ್ಕೆ ತಮಿಳುನಾಡಿನ ಚಿತ್ರ ರಸಿಕರಿಗೆ ಭರ್ಝರಿ ಗಿಫ್ಟ್ ಕೊಡಲು ಹೊರಟಿದ್ದಾರೆ. ಹೌದು, ಕೆವಿಎನ್ ಪ್ರೊಡಕ್ಷನ್ಸ್ ನಿಂದ ಬರೋಬ್ಬರಿ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಜನನಾಯಕನ್ ಸಿನೆಮಾ ದಳಪತಿ ವಿಜಯ್ ಅವರ ಕೊನೆಯ ಚಿತ್ರ ಎನ್ನಲಾಗುತ್ತಿದೆ. ಈ ಚಿತ್ರದ ಬಳಿಕ ಇಳಯ ದಳಪತಿ ವಿಜಯ್ ಸಿನೆಮಾ ಬದುಕಿಗೆ ವಿದಾಯ ಹೇಳಿ ಫುಲ್ ಟೈಂ ಪೊಲಿಟೀಶಿಯನ್ ಆಗೋಕೆ ಹೊರಟಿದ್ದಾರೆ.

ಹೌದು, ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಮೈಲಿಗಲ್ಲನ್ನೇ ಸ್ಥಾಪಿಸಿದೆ. ಕನ್ನಡದಲ್ಲಿ ಬಹುನಿರೀಕ್ಷಿತ “ಟಾಕ್ಸಿಕ್” ಸಿನಿಮಾ ನಿರ್ಮಿಸುತ್ತಿದೆ. ಕೆವಿಎನ್ ಪ್ರೊಡಕ್ಷನ್ ಅಂದ್ರೇನೇ ಅದ್ಧೂರಿ ಸಿನೆಮಾ ಎಂಬುದು ಸಿನಿ ಕ್ಷೇತ್ರದಲ್ಲಿ ಮನೆ ಮಾತಾಗಿದೆ. ಹಣ ಕೊಟ್ಟು ಸಿನಿಮಾ ನೋಡುವ ಸಿನಿರಸಿಕರಿಗೆ ನ್ಯಾಯ ಸಿಗಬೇಕು ಎನ್ನುವ ಧ್ಯೇಯ ಒಂದೆಡೆಯಾದರೆ, ಪ್ರೇಕ್ಷಕನ ಮನದಲ್ಲಿ ಮತ್ತೊಮ್ಮೆ ಸಿನಿಮಾ ನೋಡಬೇಕು ಎನ್ನುವಷ್ಟರ ಮಟ್ಟಿಗೆ ಸಿನಿಮಾ ಮಾಡುವ ಗುರಿ ಕೆವಿಎನ್ ಪ್ರೊಡಕ್ಷನ್ ನದ್ದು.

ಕೆವಿಎನ್ ಪ್ರೊಡಕ್ಷನ್ಸ್ ನ ಮುಖ್ಯಸ್ಥ ವೆಂಕಟ್ ಕೆ. ನಾರಾಯಣ್ ಕನ್ನಡದಲ್ಲಿ ಯಶ್ ನಟನೆಯ ಟಾಕ್ಸಿಕ್ ಸಿನಿಮಾ ನಿರ್ಮಿಸುತ್ತಿದ್ದಾರೆ. ಜೊತೆಗೆ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾವನ್ನು ಮಾಡುತ್ತಿದ್ದಾರೆ. ಇದೀಗ ತಮಿಳು ಚಿತ್ರರಂಗಕ್ಕೂ ಕೆವಿಎನ್ ಲಗ್ಗೆ ಇಟ್ಟಿದ್ದು ಸಿನಿ ಜಗತ್ತಿಗೆ ಸರ್ಪ್ರೈಸ್ ನೀಡಿದೆ. ಇಳಯದಳಪತಿ ವಿಜಯ್ 69ನೇ ಚಿತ್ರ “ಜನನಾಯಕನ್” ಕೆವಿಎನ್ ಸಾರಥ್ಯದಲ್ಲಿ ಸೆಟ್ಟೇರಿದ್ದು, 500 ಕೋಟಿಗೂ ಅಧಿಕ ಬಜೆಟ್ ನ ಚಿತ್ರ ಇದಾಗಿದೆ. ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ… ತಮಿಳುನಾಡಿನ ಹೆಮ್ಮೆಯ ಹಬ್ಬ ಪೊಂಗಲ್ ದಿನ ಜನನಾಯಕನ್ ತೆರೆ ಮೇಲೆ ಅಬ್ಬರಿಸಲಿದೆ.. ಜನನಾಯಕನ್ ಆಗಮನಕ್ಕಾಗಿ ದಳಪತಿ ವಿಜಯ್ ಅಭಿಮಾನಿಗಳಷ್ಟೆ ಅಲ್ಲದೇ ಇಡೀ ದಕ್ಷಿಣ ಭಾರತ ಕಾಯುತ್ತಿದೆ… 

“ಜನನಾಯಕನ್”  ಸಿನಿಮಾಗೆ ಬಂಡವಾಳ ಹಾಕಿರುವ ಕೆವಿಎನ್ ಪ್ರೊಡಕ್ಷನ್ಸ್ ಯಾವುದಕ್ಕೂ ಕೊರತೆ ಇಲ್ಲದಂತೆ ಚಿತ್ರ ನಿರ್ಮಾಣ ಮಾಡುತ್ತಿದೆ. ಅದು ಕೆವಿಎನ್ ಪ್ರೊಡಕ್ಷನ್ ಸ್ಟೈಲ್ ಕೂಡ. ಯಾವುದೇ ಸಿನಿಮಾ ಮಾಡಲಿ, ನಿರ್ಮಾಣದಲ್ಲಿ ಸಣ್ಣದೊಂದು ಹುಳುಕು ಹುಡುಕೋದು ಕಷ್ಟ. ಕೆವಿಎನ್ ಮತ್ತು ದಳಪತಿ ಒಂದಾಗಿ ಜನನಾಯಕನ ಸಿದ್ದತೆಯಲ್ಲಿ ತೊಡಗಿದ್ದಾರೆ. ಇನ್ನು ವಿದಾಯದ ಸಿನಿಮಾ ಅಂದ್ಮೇಲೆ ಏನೆಲ್ಲ ಇರಬೇಕೋ ಅದೆಲ್ಲವೂ ಇರುತ್ತದೆ ಅಂತ ಹೇಳಲಾಗ್ತಿದೆ ಜೊತೆಗೆ “ಜನನಾಯಕನ್” ಸಿನಿಮಾ ಮೂಲಕ ಒಬ್ಬ ದಳಪತಿಗೆ ಯೋಗ್ಯವಾದ ವಿದಾಯವೇ ಸಿಗುತ್ತಿದೆ…

ಎನ್ ವಿನೋತ್ ನಿರ್ದೇಶಿಸಿ ಅನಿರುದ್ದ್ ರವಿಚಂದರ್ ಮ್ಯೂಸಿಕ್ ಮಾಡಿರುವ “ಜನನಾಯಕನ್”  ಸಿನಿಮಾ ದಳಪತಿ ವಿಜಯ್ ಅವರ ಕೋಟ್ಯಾನುಕೋಟಿ ಅಭಿಮಾನಿಗಳ ಹೃದಯ ಗೆಲ್ಲೋದ್ರಲ್ಲಿ ನೋ ಡೌಟ್ ಎನ್ನಲಾಗುತ್ತಿದೆ. ಒಂದು ಕಡೆ ಪೊಂಗಲ್ ಸಂಭ್ರಮವಾದರೆ ಜೊತೆ ಜೊತೆಗೆ “ಜನನಾಯಕನ್” ಮೂಲಕ ದಳಪತಿ ವಿಜಯ್ ಅದ್ದೂರಿ ಬೀಳ್ಕೊಡುಗೆಗೆ ಜನ ಕಾಯುತ್ತಿದ್ದಾರೆ.  

“ಸಖತ್” ಸಿನಿಮಾ ಮೂಲಕ ಸಿನಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟ ಕೆವಿಎನ್ ಪ್ರೊಡಕ್ಷನ್ಸ್ ತಂಡ, ಡಿಸ್ಟ್ರಿಬ್ಯುಷನ್ ಕಾರ್ಯದಲ್ಲೂ ಅತ್ಯುತ್ತಮ ಹೆಸರು ಮಾಡಿದೆ. ಪೊಗರು, ಆರ್ ಆರ್ ಆರ್, ಸೀತಾರಾಮಂ, 777 ಚಾರ್ಲಿ, ಕೃಷ್ಣಂ ಪ್ರಣಯ ಸಖಿ, ಮಾರ್ಟಿನ್, ಹೀಗೆ ಅನೇಕ ಸಿನಿಮಾಗಳ ಡಿಸ್ಟ್ರಿಬ್ಯೂಷನ್ ಮೂಲಕ ಹೆಸರು ಗಳಿಸಿರುವ  ಕೆವಿಎನ್ ಪ್ರೊಡಕ್ಷನ್ಸ್ ತಂಡ, ಸಖತ್, ಬೈಟ್ ಲವ್, ಕೆಡಿ, ದಿ ಡೆವಿಲ್ ಸಿನೆಮಾದ ಮೂಲಕ ಪ್ರಸಿದ್ಧಿಗೆ ಬಂದಿದೆ. ಇದೀಗ “ಜನನಾಯಕನ್” ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದೆ. ಒಟ್ಟಾರೆಯಾಗಿ 2026ರ ಹೊಸ ವರ್ಷದಲ್ಲಿ “ಜನನಾಯಕನ್” ಮೂಲಕ ಕೆವಿಎನ್ ಪ್ರೊಡಕ್ಷನ್ಸ್ ಸಿನಿ ಉದ್ಯಮದಲ್ಲಿ ಸಂಚಲನ ಮೂಡಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.


Aware others:

Leave a Reply

Your email address will not be published. Required fields are marked *

error: Content is protected !!