ಕುಂದಾಪುರ: ಕೊರಗಾಭಿವೃದ್ಧಿ ಸಂಘದ ನಿಯೋಗದಿಂದ ಮುಖ್ಯಮಂತ್ರಿ ಭೇಟಿ – ಸಮಸ್ಯೆ ಪರಿಹಾರಕ್ಕೆ ಮನವಿ

ಕುಂದಾಪುರ: ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟದ ವತಿಯಿಂದ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಮಾರ್ಚ್ 24ರಂದು ಬೆಂಗಳೂರಿನಲ್ಲಿ ಭೇಟಿ ಮಾಡಿ ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.
ಸಿದ್ಧರಾಮಯ್ಯ ಅವರ ಸರ್ಕಾರೀ ಗೃಹ ಕಚೇರಿ ಕಾವೇರಿಯಲ್ಲಿ ಭೇಟಿ ಮಾಡಿದ ಕೊರಗ ಸಂಘಟನೆಯ ಸದಸ್ಯರು, ಕೊರಗ ಸಮುದಾಯದ ಯುವಜನರಿಗೆ ನೇರ ನೇಮಕಾತಿ ಮೂಲಕ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದರು. ಕೊರಗ ಸಮುದಾಯಕ್ಕೆ ನೀಡಬೇಕಿದ್ದ ಕೃಷಿ ಭೂಮಿ ಹಂಚಿಕೆಯಲ್ಲಿ ಮೀನ ಮೇಷ, ಉದ್ಯೋಗದಲ್ಲಿ ತಾರತಮ್ಯ, ಅಧಿಕಾರಿಗಳ ನಿರ್ಲಕ್ಷ್ಯ, ಮೂಲಭೂತ ಸೌಲಭ್ಯಗಳ ಕೊರತೆ, ಇತ್ಯಾದಿ ಬೇಡಿಕೆಗಳನ್ನು ಮು7ಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.
ಉಡುಪಿ ಜಿಲ್ಲಾ ಮಾಜಿ ಸಚಿವ, ಕೆ ಜಯಪ್ರಕಾಶ್ ಹೆಗ್ಡೆ ಜೊತೆಗಿದ್ದರು. ಬಳಿಕ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಣದೀಪ್, ಎಸ್ಸಿ ಎಸ್ಟಿ ಕೋಶದ ನಿದೆ೯ಶಕರಾದ ಊರ್ಮಿಳಾ, ಬುಡಕಟ್ಟು ಕಲ್ಯಾಣ ಇಲಾಖೆಯ ನಿರ್ದೇಶಕರಾದ ಕೆ ಯೋಗೀಶ್ ಅವರನ್ನು ಭೆಟಿ ಮಾಡಿ ಸಮುದಾಯದ ಅಭ್ಯುದಯದ ಬಗ್ಗೆ ಚರ್ಚಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ, ಉಪಾಧ್ಯಕ್ಷೆ ಪವಿತ್ರ, ಸಂಯೋಜಕ ಪುತ್ರ ಕೆ, ಮುಖಂಡರಾದ ಬೋಗ್ರ ಕೊಕ್ಕಣೆ೯, ಶೀನ ಕಾಂಜರಕಟ್ಟಿ, ನರಸಿಂಹ ಪೆರ್ಡೂರು, ಲೀಲಾ ಕಾಪು, ಪ್ರೀತಿ, ಸುಪ್ರಿಯಾ , ಪ್ರತಿಕ್ಷಾ, ರಕ್ಷಿತಾ, ಸಮಗ್ರ ಗ್ರಾಮೀಣ ಆಶ್ರಮದ ಅಧ್ಯಕ್ಷ ಅಶೋಕ್ ನಿಯೋಗದಲ್ಲಿದ್ದರು.