ಎಸ್. ಎಸ್. ಎಲ್.ಸಿ. ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಿದ್ದ 5 ಸಿಸಿಟಿವಿಗೆ ಹಾನಿ ಮಾಡಿದ ದುಷ್ಕರ್ಮಿಗಳು
ಕುಂದಾಪುರ: ಶುಕ್ರವಾರದಿಂದ ಆರಂಭಗೊಂಡಿರುವ ರಾಜ್ಯ ಮಟ್ಟದ ಎಸ್. ಎಸ್. ಎಲ್.ಸಿ. ಪಬ್ಲಿಕ್ ಪರೀಕ್ಷೆ ಪಾರದರ್ಶಕತೆಗಾಗಿ ಪರೀಕ್ಷಾ ಕೇಂದ್ರದಲ್ಲಿ ಅಳವಡಿಸಲಾಗಿದ್ದ 5 ಸಿಸಿಟಿವಿ ಕೆಮಾರಾಗಳನ್ನು ದುಷ್ಕರ್ಮಿಗಳು ಹಾಳುಗೆಡವಿದ ಘಟನೆ ಗುರುವಾರ ರಾತ್ರಿ ನಡೆದಿದ್ದು, ಶುಕ್ರವಾರ ಬೆಳಕಿಗೆ ಬಂದಿದೆ.

ಬೈಂದೂರು ತಾಲೂಕು ಕುಂಬದಕೋಣೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ರಾಜ್ಯ ಮಟ್ಟದ ಎಸ್. ಎಸ್. ಎಲ್.ಸಿ. ಪಬ್ಲಿಕ್ ಪರೀಕ್ಷೆಗಾಗಿ ಪರೀಕ್ಷೆ ನಡೆಯುವ ಶಾಲಾ ಆವರಣ ಹಾಗೂ ಶಾಲಾ ಕೊಠಡಿಗಳಿಗೆ ಸಿ.ಸಿ. ಅಳವಡಿಸಿ ಪರೀಕ್ಷೆಗೆ ವ್ಯವಸ್ಥೆಗೊಳಿಸಲಾಗಿತ್ತು. ಗುರುವಾರ ರಾತ್ರಿ ಯಾರೋ ಐದು ಜನ ದುಷ್ಕರ್ಮಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದು, ಶಾಲಾ ಕೊಠಡಿ ಹಾಗೂ ಸಬಾಂಗಣದ ಒಳಗೆ ಇರುವ 2 ಸಿ.ಸಿ. ಕ್ಯಾಮರಾ ಮತ್ತು ತರಗತಿ ಕೊಣೆಯೊಳಗಿನ 1 ಸಿ.ಸಿ. ಕ್ಯಾಮರ ಮತ್ತು ಶಿಕ್ಷಕರ ಕೋಣೆಯ ಎದುರು ಬಾಗದಲ್ಲಿ ಅಳವಡಿಸಿದ ಕ್ಯಾಮರ ಮತ್ತು ಮೈದಾನಕ್ಕೆ ತಾಗಿ ಇರುವ ತರಗತಿ ಕೋಣೆಯಲ್ಲಿ ಅಳವಡಿಸಿದ 1 ಕ್ಯಾಮರಾ ಒಟ್ಟು 5 ಕ್ಯಾಮರಾಗಳಿಗೆ ಹಾನಿ ಮಾಡಿದ್ದಾರೆ. ಅಲ್ಲದೇ ಕ್ಯಾಮರಾಗಳಿಗೆ ಅಳವಡಿಸಿದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದು ಸುಮಾರು 12 ಸಾವಿರ ರೂಪಾಯಿ ನಷ್ಟವುಂಟುಮಾಡಿದ್ದಾರೆ. ಈ ಬಗ್ಗೆ ಬೈಂದೂರು ಕಾಲೇಜಿನ ಉಪ ಪ್ರಾಂಶುಪಾಲ ಬಿ.ಸಿ.ಶೆಣೈ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.