ಬೈಕ್ ಚರಂಡಿಗೆ ಬಿದ್ದು ಸವಾರ ಸಾವು
ಕುಂದಾಪುರ: ಬೈಕೊಂದು ಸವಾರನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ಆಜ್ರಿ ಗ್ರಾಮದ ತಾರೆಕೊಡ್ಲು ಎಂಬಲ್ಲಿ ನಡೆದಿದೆ. 74 ನೇ ಉಳ್ಳೂರಿನ ನಿವಾಸಿ ಚಂದ್ರಶೇಖರ (56) ೆಂಬುವರೇ ಸಾವನ್ನಪ್ಪಿದ ದುರ್ದೈವಿ ಬೈಕ್ ಸವಾರ.
ಚಂದ್ರಶೇಖರ್ ಅವರು ಗುರುವಾರ ಮಧ್ಯಾಹ್ನ ಹಳ್ಳಿಹೊಳೆ ಗ್ರಾಮದ ಕೆ ಎಸ್ ಛಾತ್ರ ರವರ ತೋಟದಲ್ಲಿರುವ ವೀಳ್ಯದ ಎಲೆಯನ್ನು ಕೊಯ್ದು, ಮದ್ಯಾಹ್ನ 3 ಗಂಟೆ ಸುಮಾರಿಗೆ ವಾಪಾಸ್ಸು ಅವರ ಮನೆಗೆ ಬೈಕಿನಲ್ಲಿ ಹಿಂತಿರುಗುತ್ತಿದ್ದರು. ತಾರೆಕೊಡ್ಲು ಎಂಬಲ್ಲಿ ನಿಯಂತ್ರಣ ತಪ್ಪಿದ ಬೈಕ್ ರಸ್ತೆ ಪಕ್ಕದ ಚರಂಡಿಗೆ ಬಿದ್ದಿದೆ. ಪರಿಣಾಮವಾಗಿ ಬೈಕ್ ಸವಾರ ಚಂದ್ರಶೇಖರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.