ಯಡಾಡಿ-ಮತ್ಯಾಡಿ: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಮನ್ಮಹಾರಥೋತ್ಸವ ಸಂಪನ್ನ

ಕುಂದಾಪುರ: ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 11 ರಿಂದ 14ರ ವರೆಗೆ ಅಷ್ಟಬಂಧ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮವು ಉತ್ಸವ ಸಮಿತಿಯ ಗೌರವ ಅಧ್ಯಕ್ಷ ಕೇಸನಮಕ್ಕಿ ಬಡಾಮನೆ ರತ್ನಾಕರ ಹೆಗ್ಡೆ, ಪ್ರದಾನ ತಂತ್ರಿಗಳಾದ ವೇದ ಮೂರ್ತಿ ಶ್ರೀಕೃಷ್ಣ ಸೋಮಯಾಜಿ, ಆಡಳಿತ ಮೊಕ್ತೇಸರ ವೈ ಗಣೇಶ್ ಭಟ್ ನೇತೃತ್ವದಲ್ಲಿ ಸಂಪನ್ನಗೊಂಡಿತು.

ಮಾರ್ಚ್ 14ರಂದು ಶುಕ್ರವಾರ ಸಂಜೆ ಗೋಧೂಳಿ ಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ಸಂಪನ್ನಗೊಂಡಿತು. ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ ಯಡಾಡಿ ಇವರ ಸಂಯೋಜನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಮತ್ತು ರಾತ್ರಿ ಕಲಾಚಂದನ ತಂಡದಿಂದ ಲಾಸ್ಟ್ ವಾರ್ನಿಂಗ್ ನಾಟಕ ಪ್ರದರ್ಶನ ನಡೆಯಿತು.

ಬ್ರಹ್ಮ ಕಲಶೋತ್ಸವದ ಅನ್ನದಾನವನ್ನು ಉದ್ಯಮಿಗಳಾದ ಹೋಟೆಲ್ ಶ್ರೀ ಮಂದರತಿ ಗ್ರೂಪ್ ಬೆಂಗಳೂರಿನ ನರಸಿಂಹ ವೈ, ಶ್ರೀ ವಿಜಯ ವೈ ಹಾಗೂ ಮನ್ಮಹಾರಥೋತ್ಸವದ ಅನ್ನದಾನವನ್ನು ದಾನಿಗಳಾದ ಪ್ರಶಾಂತ್ ಇಂಜಿನಿಯರ್, ಮೊಳಹಳ್ಳಿ ವಹಿಸಿಕೊಂಡಿದ್ದರು. ಶ್ರೀ ವಿನಾಯಕ ದೇವಸ್ಥಾನ, ಗುಡ್ಡಟ್ಟು ಸಹಕಾರವಿತ್ತು.