BlogCulturalEconomyElectionFashionHighlightsHuman storiesLifestyleLocal newsNational NewsOthersReligionState newsSuccess storiesTop StoriesTrending

ಕುಂದಾಪುರ: ಅಜ್ಮೀರ್ ಧರ್ಮ ಪ್ರಾಂತ್ಯದ ಹೊಸ ಬಿಷಪ್ ಆಗಿ ಕುಂದಾಪುರದ ಬಸ್ರೂರಿನ ಫಾದರ್ ಕರ್ವಾಲೋ

Aware others:

ಕುಂದಾಪುರ: ಅಜ್ಮೀರ್ ಧರ್ಮ ಪ್ರಾಂತ್ಯದ ಹೊಸ ಬಿಷಪ್ ಆಗಿ ಮೂಲತಃ ಕುಂದಾಪುರ ತಾಲೂಕಿನ ಬಸ್ರೂರಿನ ಫಾದರ್ ಜಾನ್ ಕರ್ವಾಲೋ ಆಯ್ಕೆಯಾಗಿದ್ದಾರೆ. ರೋಮ್‌ನಲ್ಲಿ ಘೋಷಣೆಯ ನಂತರ ಅಜ್ಮೀರ್‌ನ ಹಂಗಾಮಿ ಬಿಷಪ್ ಓಜ್‌ವರ್ಲ್ಡ್ ಲೂಯಿಸ್ ಈ ಘೋಷಣೆ ಮಾಡಿದ್ದು, ಫಾದರ್ ಕರ್ವಾಲೋ ನೇಮಕ ಅಧಿಕೃತವಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಫಾದರ್ ಜಾನ್ ಕರ್ವಾಲೋ, ಈ ಜವಾಬ್ದಾರಿಗೆ ಆಯ್ಕೆಯಾಗಿರುವುದು ಅದೃಷ್ಟ ಎಂದಿದ್ದಾರೆ. ಅಜ್ಮೀರ್ ಹೊರತುಪಡಿಸಿ, ಉದಯಪುರ ಮತ್ತು ಜೈಪುರಗಳು ರಾಜ್ಯದಲ್ಲಿ ಧಾರ್ಮಿಕ ಪ್ರಾಂತ್ಯಗಳಾಗಿವೆ. ಅಜ್ಮೀರ್ ಧರ್ಮಪ್ರಾಂತ್ಯದಲ್ಲಿರುವ 12 ಕ್ಕೂ ಹೆಚ್ಚು ಜಿಲ್ಲೆಗಳ ಚರ್ಚುಗಳು ಬಿಷಪ್ ಆಡಳಿತಕ್ಕೊಳಪಡುತ್ತವೆ.

1969ರ ಎಪ್ರಿಲ್ 10ರಂದು ಕರ್ನಾಟಕದ ಉಡುಪಿ ಜಿಲ್ಲೆಯ ಬಸ್ರೂರು ಗ್ರಾಮದಲ್ಲಿ ಜನಿಸಿದರು. ಫಾದರ್ ಜಾನ್ ಕರ್ವಾಲೋ ಅವರ ತಂದೆ ದಿವಂಗತ ಪೀಟರ್ ಕಾರ್ವಾಲ್ಹೋ. ತಾಯಿ ಮಾರ್ಗರೇಟ್.  ಏಳು ಜನ ಒಡಹುಟ್ಟಿದವರಲ್ಲಿ ಜಾನ್  ಐದನೆಯವರು. 1986ರಲ್ಲಿ ತಮ್ಮ ಪ್ರಾಥಮಿಕ ಶಿಕ್ಷಣಕ್ಕಾಗಿ ಅಜ್ಮೀರ್‌ಗೆ ಬಂದರು. ಬಳಿಕ ಪ್ರಯಾಗರಾಜ್‌ನ ಸೇಂಟ್ ಜೋಸೆಫ್‌ನಲ್ಲಿ ಅಧ್ಯಯನ ಮಾಡಿದರು. ಮೇ 13, 1996 ರಂದು ಅವರು ಅಜ್ ಧರ್ಮ ಪ್ರಾಂತ್ಯದ ಅರ್ಚಕರಾದರು. ಇದಾದ ನಂತರ ಅವರು ಕೋಟಾ, ಲಾಡ್ಪುರ, ಭವಾನಿ ಖೇಮದ್ದಾರ್, ಅಜ್ಮೀರ್ ಮತ್ತು ಮುಂಬೈಗಳಲ್ಲಿ ಪ್ಯಾರಿಷ್ ಪಾದ್ರಿ, ಶಾಲಾ ಪ್ರಾಂಶುಪಾಲರು ಮತ್ತು ಸಾಮಾಜಿಕ ಸಂಸ್ಥೆಗಳಲ್ಲಿ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!