BlogCrime newsEconomyGovernmentHealthHighlightsHuman storiesLifestyleLocal newsNatureOthersProtestState newsTop StoriesTrending

ಕುಂದಾಪುರ: ಕರಾವಳಿಯಲ್ಲಿ ಹೆಚ್ಚುತ್ತಿರುವ ಉಪ್ಪು ನೀರಿನ ಹಾವಳಿ – ಟಿಟಿರಸ್ತೆಯ 100 ಎಕ್ರೆಗೂ ಮಿಕ್ಕಿ ಕೃಷಿ ಭೂಮಿ ನಾಶ

Aware others:

ಕುಂದಾಪುರ: ಒಂದು ಕಡೆ ಸುಡು ಬೇಸಿಗೆ. ಇನ್ನೊಂದು ಕಡೆ ಕುಡಿಯುವ ನೀರಿಗೆ ತಾತ್ವಾರ. ಇದೆಲ್ಲದರ ನಡುವೆ ಕರಾವಳಿ ತೀರದಲ್ಲಿ ಉಪ್ಪು ನೀರಿನ ಹಾವಳಿಯಿಂದ ಕೃಷಿ ಭೂಮಿಯೂ ನಾಶ ಕುಡಿಯುವ ನೀರೂ ಉಪ್ಪುಪ್ಪು. ಪರಿಣಾಮವಾಗಿ ಕಡು ಬೇಸಿಗೆಯಲ್ಲೂ ಉಪ್ಪು ನೀರು ನುಗ್ಗಿ ಹೊಳೆಯಂತಾಗಿರುವ ಫಲವತ್ತಾದ ಕೃಷಿ ಗದ್ದೆಗಳು.

ವಡೆರೋಬಳಿ ಗ್ರಾಮದ ಟಿಟಿ ರಸ್ತೆ ಆರಮಚನ್ನಕೇಶ್ವರ ದೇವಸ್ಥಾನದ ಹಿಂಬದಿಯಲ್ಲಿ ಅಂದಾಜು 80 ರಿಂದ 100 ಎಕರೆ ಕೃಷಿ ಫಲವತ್ತಾದ ಕೃಷಿ ಭೂಮಿ ಇದ್ದು ಪ್ರತಿ ವರ್ಷ ಜನವರಿ ಫೆಬ್ರವರಿ ಮಾರ್ಚ್ ತಿಂಗಳಲ್ಲಿ ಉಪ್ಪು ನೀರು ಕೃಷಿಗದ್ದೆಗಳಿಗೆ ನುಗ್ಗಿ ಕೃಷಿಕರಿಗೆ  ಕೃಷಿ ಮಾಡಲು ತೀವ್ರ ಹಿನ್ನಡೆಯಾಗುತ್ತಿದೆ. ಈ ಬಗ್ಗೆ ಕಳೆದ ಹಲವಾರು ವರ್ಷಗಳಿಂದ ಸ್ಥಳೀಯ ಪುರಸಭೆ ಹಾಗೂ ಸಣ್ಣ ನೀರಾವರಿ ಇಲಾಖೆಗೆ ಮನವಿ ಮಾಡಿಕೊಂಡರು ಯಾವುದೇ ಕ್ರಮ ಪ್ರಯೋಜನ ಆಗಿಲ್ಲ ಎನ್ನುತ್ತಾರೆ ಇಲ್ಲಿನ ರೈತರು. ತೀರಪ್ರದೇಶದಲ್ಲಿ ವೈಜ್ಞಾನಿಕವಾದ ಉಪ್ಪು ನೀರು ತಡೆಗೋಡೆ ಅಥವಾ ರಿಂಗ್ ರೋಡ್ ಮಾಡದೇ ಇದ್ದರೆ ಇಲ್ಲಿನ ರೈತರಿಗೆ ಭವಿಷ್ಯಮಂಕಾಗಲಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ. ಇನ್ನಾದರೂ ಪುರಸಭೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ.


Aware others:

Leave a Reply

Your email address will not be published. Required fields are marked *

error: Content is protected !!