BlogCulturalEconomyGovernmentHighlightsHuman storiesLifestyleLocal newsOthersPoliticsTop StoriesTrending

ಕೋಡಿಯಲ್ಲಿ ಉಪ್ಪು ನೀರು ತಡಗೋಡೆಗೆ ಅನುದಾನ ಮಂಜೂರು ಕೋರಿ  ಸಚಿವರಿಗೆ ಮನವಿ ಸಲ್ಲಿಸಿದ ಶಾಸಕ ಕಿರಣ್ ಕೊಡ್ಗಿ

Aware others:

ಕುಂದಾಪುರ: ಕುಂದಾಪುರ ತಾಲೂಕಿನ ಕೋಡಿ ಪ್ರದೇಶದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ಉಪ್ಪು ನೀರು ಬರದಂತೆ ತಡೆಯಲು ನದಿ ದಂಡೆ ಸಂರಕ್ಷಣೆಗೆ ಅನುದಾನ ಮಂಜೂರು ಮಾಡುವಂತೆ ಕುಂದಾಪುರದ ಶಾಸಕರಾದ ಎ.ಕಿರಣ್ ಕುಮಾರ್ ಕೊಡ್ಗಿಯವರು ಸಣ್ಣ ನೀರಾವರಿ ಸಚಿವರಾದ ಎನ್ಎಸ್ ಬೋಸರಾಜರಿಗೆ ಮನವಿ ಮಾಡಿದರು.

ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಶಾಸಕ ಕೊಡ್ಗಿ, ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ಎಸ್ ಬೋಸರಾಜರನ್ನು ಭೇಟಿ ಮಾಡಿ ಕೋಡಿ ಪ್ರದೇಶದಲ್ಲಿ ಕೃಷಿ ಜಮೀನು ಮತ್ತು ಮನೆಗಳಿಗೆ ನದಿಗಳಿಂದ ಉಪ್ಪು ನೀರು ನುಗ್ಗುತ್ತಿದ್ದು ಇಲ್ಲಿನ ಜನ ವಸತಿ ಪ್ರದೇಶದ ಗ್ರಾಮಸ್ಥರು ದಿನ ನಿತ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಎಂದು ಮನವರಿಕೆ ಮಾಡಿದ್ದಾರೆ.

ಉಪ್ಪು ನೀರು ನುಗ್ಗುವುದರಿಂದ ನೂರಾರು ಎಕರೆ ಕೃಷಿ ಜಮೀನಿನಲ್ಲಿ ಕೃಷಿ ಮಾಡಲಾಗುತ್ತಿಲ್ಲ. ಕುಡಿಯುವ ನೀರು ಸಹ ಉಪ್ಪಾಗಿದ್ದು ಹಾಗೂ ಉಪ್ಪು ನೀರು ನಿಲ್ಲುವುದರಿಂದ ಹುಲ್ಲು ಮತ್ತು ಗಿಡಗಳು ಕೊಳೆತು ವಿಪರೀತ ಸೊಳ್ಳೆ ಉತ್ಪತ್ತಿಯಾಗುತ್ತಿದ್ದು ಸಾಂಕ್ರಮಿಕ ರೋಗ ಹರಡುವ ಸಾಧ್ಯತೆ ಇದೆ. ತಕ್ಷಣ ಉಪ್ಪು ನೀರು ನುಗ್ಗದಂತೆ ನದಿ ದಂಡೆ ಕಟ್ಟುವ ಅಗತ್ಯತೆ ಇದ್ದು ಅನುದಾನ ಮಂಜೂರು ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!