ಕುಂದಾಪುರ: ಸರ್ಕಾರಿ ಅಧಿಕಾರಿಗಳ 22ಕ್ಕೂ ಅಧಿಕ ನಕಲಿ ಸೀಲ್ ಬಳಸಿ ವಂಚನೆ – ಆರೋಪಿಗೆ ನ್ಯಾಯಾಂಗ ಬಂಧನ
ಕುಂದಾಪುರ: ಸರ್ಕಾರೀ ಇಲಾಖೆಗಳ 22ಕ್ಕೂ ಅಧಿಕ ನಕಲಿ ಸೀಲು ಬಳಸಿ ಸರ್ಕಾರಕ್ಕೂ, ಸಾರ್ವಜನಿಕರಿಗೂ ವಂಚಿಸುತ್ತಿದ್ದ ವ್ಯಕ್ತಿಯೊಬ್ಬನ್ನು ನ್ಯಾಯಾಲಯದ ಆದೇಶದಂತೆ ಬಂಧಿಸಿ ನಕಲಿ ಸೀಲುಗಳನ್ನು ವಶಪಡಿಸಿಕೊಂಡು ಜೈಲಿಗಟ್ಟಿದ ಘಟನೆ ಕುಂದಾಪುರ ನಗರದ ಫೆರ್ರಿ ರಸ್ತೆಯಲ್ಲಿರುವ ಅರ್ಜಿ ಕೇಂದ್ರದಲ್ಲಿ ನಡೆದಿದೆ. ಕೋಡಿಯ ನಾಗೇಶ್ ಕಾಮತ್ ಎಂಬಾತನೇ ನಕಲಿ ಸೀಲ್ ಬಳಸಿ ವಂಚಿಸುತ್ತಿದ್ದ ಆರೋಪಿ.

ಆರೋಪಿ ನಾಗೇಶ್ ಅಕ್ರಮ ವ್ಯವಹಾರ ನಡೆಸುತ್ತಿರುವುದರ ಬಗ್ಗೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಬಳಿಕ ಆರೋಪಿಯನ್ನು ಪತ್ತೆ ಹಚ್ಚಿ ಶೋಧ ನಡೆಸಿ ಎನ್ನುವಂತೆ ನ್ಯಾಯಾಲಯ ಸರ್ಚ್ ವಾರಂಟ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಕುಂದಾಫುರ ಸಬ್ ಇನ್ಸ್ ಪೆಕ್ಟರ್ ನಂಜಾ ನಾಯ್ಕ್ ತಂಡ ನಗರದ ಫೆರ್ರಿ ರಸ್ತೆಯಲ್ಲಿರುವ ಅರ್ಜಿ ಕೇಂದ್ರಕ್ಕೆ ದಾಳಿ ನಡೆಸಿತ್ತು. ದಾಳಿ ಸಂದರ್ಭ ಆರೋಪಿ ನಾಗೇಶ್ ಸ್ಥಳದಲ್ಲಿಯೇ ಇದ್ದು, ಆತನನ್ನು ಬಂಧಿಸಿದ್ದಾರೆ. ಬಳಿಕ ಶೋಧ ನಡೆಸಿದಾಗ ಜಿಲ್ಲಾಧಿಕಾರಿಗಳ ಕಛೇರಿ ಉಡುಪಿ ಜಿಲ್ಲೆ ರಜತಾದ್ರಿ ಮಣಿಪಾಲ ಎಂದಿರುವ ಕನ್ನಡದಲ್ಲಿ ತಯಾರಿಸಿದ ರೌಂಡ್ ಸೀಲು, ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ತಯಾರಿಸಿದ ಬೈಂದೂರು ಉಪನೋಂದಣಾಧಿಕಾರಿಗಳ ರೌಂಡ್ ಸೀಲು, ಕುಂದಾಫುರ ತಾಲೂಕು ಸಾರ್ವಜನಿಕ ಆಸ್ಪತ್ರೆ ಜನನ ಮತ್ತು ಮರಣ ಉಪನೋಂದಣಾಅಧಿಕಾರಿಗಳ ಕನ್ನಡ ಮತ್ತು ಇಂಗ್ಲೀಷ್ ನಲ್ಲಿದ್ದ ರೌಂಡ್ ಸೀಲು, ಬೀಜಾಡಿ ಗ್ರಾಮ ಪಂಚಾಯತ್ ಕಾರ್ಯಾಲಯದ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ತಯಾರಿಸಿದ ರೌಂಡ್ ಸೀಲು, Registrar of Birth & Death Udupi City Muncipal Counsil Udupi ಎಂಬ ಸೀಲು, REGISTARAR OF BIRTH & DEATH TOWN MUNCIPAL OFFICE KUNDAPURA ಎಂಬ ಸೀಲು, ಕುಂದಾಪುರ ತಹಶೀಲ್ದಾರರ ಸೀಲು, ಬಸ್ರೂರು ಗ್ರಾಮ ಪಂಚಾಯತ್ ಅಧ್ಯಕ್ಷರ ಸೀಲು, ಮುಖ್ಯೋಪಾಧ್ಯಾಯರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಾವುಂದ – ಉಡುಪಿ ಜಿಲ್ಲೆ ಎಂಬ ಸೀಲು, HEALTH OFFICER Govt. Hospital Kundapra, Udupi Dist., REGISTRAR OF MARRIAGE KUNDAPUR, ಮುಖ್ಯೋಪಾಧ್ಯಾಯರು ಭಾರತ್ ಮಾತಾ ಪ್ರೌಢ ಶಾಲೆ ಮುದೂರು ಉಡುಪಿ ಜಿಲ್ಲೆ, Medical Officer and Sun Registrar of Births and Deaths District Hopsital, Udupi District, ಪಂಚಾಯತ್ ಅಭಿವೃದ್ದಿ ಅಧಿಕಾರಿ ಗ್ರಾಮ ಪಂಚಾಯತ್, ಗೋಪಾಡಿ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ, ನಂ. 2. 2 ನೇ ಉಪ-ವಿಭಾಗ ಕುಂದಾಪುರ ತಾಲೂಕು, ಉಪನೋಂದಣಾಧಿಕಾರಿ ಬೈಂದೂರು, ನಿಯೋಜಿತ ಅಧ್ಯಕ್ಷರು ಶಿಕ್ಷಣ ಭಾರತಿ ಕ್ರೆಡಿಟ್ ಸಹಕಾರ ಸಂಘ (ನಿ). ಡೋರ್ ನಂ 3/7, ಶ್ರೀರಾಮ ನಗರ, ಕೋಡಿ, ಕುಂದಾಫುರ ತಾಲೂಕು, ಉಡುಪಿ ಜಿಲ್ಲೆ., ಉಪ ತಹಶೀಲ್ದಾರರು ಉಡುಪಿ ಉಡುಪಿ ಜಿಲ್ಲೆ- 576102, ತಾಲೂಕು ಭೂ ಮಾಪಕರು ಕುಂದಾಪುರ, ಕನ್ನಡ ಮತ್ತು ಇಂಗ್ಲೀಷ್ ನಲ್ಲಿರುವ ಮದುವೆ ಆಫೀಸರು ಕುಂದಾಪುರ ಆಫೀಸು, ಗ್ರಾಮ ಪಂಚಾಯತ್ ಬಸ್ರೂರು ಬಸ್ರೂರು 576211 ಕುಂದಾಪುರ ತಾ// ಉಡುಪಿ ಜಿಲ್ಲೆ ಸೇರಿದಂತೆ 22ಕ್ಕೂ ಅಧಿಕ ನಕಲಿ ಸೀಲುಗಳು ಪತ್ತೆಯಾಗಿವೆ.
ಕಳೆದ ಹಲವು ವರ್ಷಗಳಿಂದ ನಕಲಿ ಸೀಲ್ ಬಳಸಿ ವಂಚಿಸುತ್ತಿದ್ದ ಕೋಡಿ ನಾಗೇಶ್ ಬಗ್ಗೆ ಸಾರ್ವಜನಿಕರು ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ಆದರೆ ಅದಕ್ಕೆ ಪೂರಕವಾದ ದಾಖಲೆಗಳು ಸಿಕ್ಕಿರಲಿಲ್ಲ ಎಂದು ತಿಳಿದು ಬಂದಿದೆ. ನಕಲಿ ದಸ್ತಾವೇಜುಗಳಿಗೆ ಈ ನಕಲಿ ಸೀಲುಗಳನ್ನು ಬಳಸಿ ದಸ್ತಾವೇಜು ಸಿದ್ಧಪಡಿಸಿ ಸಾರ್ವಜನಿಕರಿಗೆ ಹಾಗೂ ಇಲಾಖೆಗಳಿಗೆ ವಂಚಿಸುತ್ತಿದ್ದ ಎಂದು ತಿಳಿದು ಬಂದಿದೆ. ಈ ಹಿಂದೆ ಕುಮದಾಪುರದ ತಹಸೀಲ್ದಾರರಾಗಿದ್ದ ಗಾಯತ್ರಿ ನಾಯಕ್ ಅವರ ಮೊಹರನ್ನು ನಕಲಿಯಾಗಿ ಬಳಸಿ ಸಿಕ್ಕಿಬಿದ್ದಿದ್ದ. ಆದರೆ ಬಳಿಕ ಾತನಿಗೆ ನಯಾಯಾಲಯ ಜಾಮೀನು ನೀಡಿತ್ತು. ಮತ್ತೆ ಪುನಃ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಆರೋಪಿ ನಾಗೇಶ್ ನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಈತನಿಂದ ಸಂತ್ರಸ್ಥರಾಗಿರುವ ಸಾರ್ವಜನಿಕರು ಆಗ್ರಹಿಸಿದ್ದಾರೆ.