BlogCulturalEntertainmentFashionLifestyleLocal newsOthersReligionTop StoriesTrending

ಮಾರ್ಚ್ 11-14ವರೆಗೆ ಯಡಾಡಿ-ಮತ್ಯಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವ

Aware others:

ಕುಂದಾಪುರ: ಕುಂದಾಪುರ ತಾಲೂಕಿನ ಯಡಾಡಿ-ಮತ್ಯಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಾರ್ಚ್ 11 ರಿಂದ 14ರ ವರೆಗೆ ಅಷ್ಟಬಂಧ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾರಥೋತ್ಸವ ಕಾರ್ಯಕ್ರಮವು ಉತ್ಸವ ಸಮಿತಿಯ ಗೌರವ ಅಧ್ಯಕ್ಷ ಕೇಸನಮಕ್ಕಿ ಬಡಾಮನೆ ರತ್ನಾಕರ ಹೆಗ್ಡೆ, ಪ್ರದಾನ ತಂತ್ರಿಗಳಾದ ವೇದ ಮೂರ್ತಿ ಶ್ರೀಕೃಷ್ಣ ಸೋಮಯಾಜಿ, ಆಡಳಿತ ಮೊಕ್ತೇಸರ ವೈ ಗಣೇಶ್ ಭಟ್ ನೇತೃತ್ವದಲ್ಲಿ ನಡೆಯಲಿದೆ.

ಮಾರ್ಚ್ 11ರಂದು ಬೆಳಿಗ್ಗೆ ಅಷ್ಟಬಂಧ ಪುನಃಪ್ರತಿಷ್ಠೆ, ಮಾರ್ಚ್ 12ರಂದು ಬ್ರಹ್ಮಕಲಶೋತ್ಸವ, ರುದ್ರಹೋಮ, ಧ್ವಜಾರೋಹಣ, ಮಹಾಪೂಜೆ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ರಾತ್ರಿ ಹೋಮ ಬಲಿ, ಅಂಕುರ ಸ್ಥಾಪನೆ ಕಾರ್ಯಕ್ರಮಗಳು ನಡೆಯಲಿವೆ. ಮಾರ್ಚ್ 14ರಂದು ಶ್ರೀ ಮನ್ಮಹಾರಥೋತ್ಸವ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ಸಂಜೆ 4.30ಕ್ಕೆ ರಥ ಅವರೋಹಣ, ವಸಂತ ಪೂಜೆ, ಅಷ್ಟಾವಧಾನ ಸೇವೆ, ಶಯನೋತ್ಸವ ಕಾರ್ಯಕ್ರಮ ನಡೆಯಲಿದೆ.

ಮಾರ್ಚ್ 15ರಂದು ಬೆಳಿಗ್ಗೆ ಪ್ರಭೋಧೋತ್ಸವ, ಅಧಿವಾಸ ಹೋಮ, ಧ್ವಜ ಅವರೋಹಣ, ಸಂಜೆ ಓಕುಳಿ ಮತ್ತು ಮಾರ್ಚ್ 16ರಂದು ಸಂಪ್ರೋಕ್ಷಣೆ ನಡೆಯಲಿದೆ. ಬ್ರಹ್ಮ ಕಲಶೋತ್ಸವದ ಅನ್ನದಾನವನ್ನು ಉದ್ಯಮಿಗಳಾದ ಹೋಟೆಲ್ ಶ್ರೀ ಮಂದರತಿ ಗ್ರೂಪ್ ಬೆಂಗಳೂರಿನ ನರಸಿಂಹ ವೈ, ಶ್ರೀ ವಿಜಯ ವೈ ಹಾಗೂ ಮನ್ಮಹಾರಥೋತ್ಸವದ ಅನ್ನದಾನವನ್ನು ದಾನಿಗಳಾದ ಪ್ರಶಾಂತ್ ಇಂಜಿನಿಯರ್, ಮೊಳಹಳ್ಳಿ ಇವರು ವಹಿಸಿಕೊಂಡಿದ್ದಾರೆ. ಶ್ರೀ ವಿನಾಯಕ ದೇವಸ್ಥಾನ, ಗುಡ್ಡಟ್ಟು ಇವರ ಸಹಕಾರವಿದೆ.

ಮಾರ್ಚ್ 14 ರಂದು ಸಂಜೆ 6:30ಗೆ ಶ್ರೀ ಮಹಾಲಿಂಗೇಶ್ವರ ಗೆಳೆಯರ ಬಳಗ ಯಡಾಡಿ ಇವರ ಸಂಯೋಜನೆಯಲ್ಲಿ 7ನೇ ವರ್ಷದ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈಭವ ಮತ್ತು ರಾತ್ರಿ ಕಲಾಚಂದನ ತಂಡದಿಂದ ಲಾಸ್ಟ್ ವಾರ್ನಿಂಗ್ ನಾಟಕ ಪ್ರದರ್ಶನ ನಡೆಯಲಿದೆ.


Aware others:

Leave a Reply

Your email address will not be published. Required fields are marked *

error: Content is protected !!