BlogEducationFashionGovernmentHighlightsLifestyleLocal newsNatureTop StoriesTrending

ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತಿಹಾಸ ದರ್ಪಣ ಉಪನ್ಯಾಸ

Aware others:

ಕುಂದಾಪುರ: ಸರ್ಕಾರ ಪ್ರಥಮ ದರ್ಜೆ ಕಾಲೇಜು ಬೈಂದೂರು, ಇತಿಹಾಸ ವಿಭಾಗ ಹಾಗೂ ಭಾರತೀಯ ಇತಿಹಾಸ ಸಂಕಲನ ಸಮಿತಿ ಕನಾ೯ಟಕ ಉಡುಪಿ ಜಿಲ್ಲೆ ವತಿಯಿಂದ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು  ಕಾಲೇಜು ಸಭಾಂಗಣದಲ್ಲಿ *ಇತಿಹಾಸ ದಪ೯ಣ* ವಿಶೇಷ ಉಪನ್ಯಾಸನ ಕಾಯ೯ಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಸ್ವತಂತ್ರ ಸಂಶೋಧಕ ಅಜಯ್ ಕುಮಾರ್ ಶರ್ಮಾ ಅವರು ಆಕಾಶ ಬಾಣ ಭಾರತದ ಲೋಹದ ಕೊಳವೆಯ ರಾಕೇಟ್ ನ ಇತಿಹಾಸವನ್ನು ಹಂಚಿಕೊಂಡರು. ಸ್ವಾತಂತ್ರ್ಯ ಹೋರಾಟಗಾರರ ಬಾಡಾ ಮಂಜುನಾಥ್ ಜೋಷಿ ಮೊಮ್ಮಗಳು ಜಯದೇವಿ ಭಟ್ ಉದ್ಘಾಟಿಸಿ ಶುಭಕೋರಿದರು. ಚಿತ್ರಾ ಪಡಿಯಾರ್, ಮಮತ, ಪ್ರದೀಪ ಕುಮಾರ್ ಬಸ್ರೂರು, ಕವಿತಾ ಆಚಾರ್ಯ ಮುದೂರು ಮೊದಲಾದವರು ವಿಚಾರ ಹಂಚಿಕೊಂಡರು.

ಕಾಲೇಜಿನ ಪ್ರಾಂಶುಪಾಲ ನಾಗರಾಜ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳಾದ ಮೇಘ, ಹರ್ಷಿತಾ ಪ್ರಾರ್ಥಿಸಿದರು. ಪ್ರಾಸ್ತಾವಿಕ ನುಡಿಯನ್ನು  ಉಪನ್ಯಾಸಕ ನವೀನ್  ಹೆಚ್.ಜೆ. ಪ್ರಸ್ತಾವಿಸಿದರು. ಉಪನ್ಯಾಸಕ ವಿಘ್ನೇಶ್ ವಂದಿಸಿ ವಿದ್ಯಾರ್ಥಿನಿ ಅಶ್ವಿನಿ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!