BlogFashionGovernmentHighlightsHuman storiesLifestyleLocal newsPoliticsReligionState newsSuccess storiesTop StoriesTrending

ರಾಜ್ಯ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ ಜಿ. ಮೊಹಮ್ಮದ್ ಗುಲ್ವಾಡಿ ಆಯ್ಕೆ

Aware others:

ಕುಂದಾಪುರ: ಕರ್ನಾಟಕ ರಾಜ್ಯ ಕಾಂಗ್ರೆಸ್ ಪಕ್ಷದ ಅಲ್ಪ ಸಂಖ್ಯಾತ ಘಟಕದ ಕಾರ್ಯದರ್ಶಿಯಾಗಿ ಹಿರಿಯ ಕಾಂಗ್ರೆಸ್ ಮುಖಂಡ ಜಿ. ಮೊಹಮ್ಮದ್ ಗುಲ್ವಾಡಿ ನೇಮಕಗೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ, ಸಂಸದ ಇಮ್ರಾನ್ ಪ್ರತಾಪಘರಿ ಸೂಚನೆ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಶಾಸಕ ಕೆ.ಅಬ್ದುಲ್ ಜಬ್ಬಾರ್ ಅಧಿಕೃತವಾಗಿ  ಈ ಆದೇಶ ಹೊರಡಿಸಿದ್ದಾರೆ.

ಜಿ. ಮೊಹಮ್ಮದ್ ಗುಲ್ವಾಡಿ

ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಜಿ. ಮೊಹಮ್ಮದ್ ಗುಲ್ವಾಡಿಯವರು ಗುಲ್ವಾಡಿ ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾಗಿ, ಗ್ರಾಮಸ್ಥರ  ಹಿತ  ರಕ್ಷಣಾ ಗುಲ್ವಾಡಿ ಇದರ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮೆಹರಾಜ್ ಜುಮ್ಮಾ  ಮಸ್ಜಿದ್ ಗುಲ್ವಾಡಿ ಇದರ ಉಪಾಧ್ಯಕ್ಷರಾಗಿ, ಗುಲ್ವಾಡಿ ಗಣೇಶ ಉತ್ಸವದ ಮಾಜಿ ಉಪಾಧ್ಯಕ್ಷರಾಗಿ, ತಲ್ಲೂರು ವಿದ್ಯುತ್ ಸಲಹೆ ಸಮಿತಿಯ ಮಾಜಿ ಸದ್ಯಸ್ಯರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.

ಆದೇಶ ಪ್ರತಿ

ಪ್ರಸ್ತುತ ಕುಂದಾಪುರ ಭೂ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕರಾಗಿರುವ ಜಿ. ಮೊಹಮ್ಮದ್ ಗುಲ್ವಾಡಿ, ಜಮೀಯತುಲ್ ಫಲಹ  ಕುಂದಾಪುರ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಸರ್ವೋದಯ  ಪ್ರಾಥಮಿಕ ಶಾಲೆಯ ಉಪಾಧ್ಯಕ್ಷರಾಗಿ, ಎನ್ ಎನ್ ಒ (ನಮ್ಮ ನಾಡು ಒಕ್ಕೂಟ) ಕಮ್ಯುನಿಟಿ ಸೆಂಟರ್ ಕುಂದಾಪುರ ಇದರ ಉಪಾಧ್ಯಕ್ಷರಾಗಿ, ಜಿಲ್ಲಾ ಘಟಕದ ಸದಸ್ಯರಾಗಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಪೂರ್ವ ಉಪಾಧ್ಯಕ್ಷರಾಗಿರುವ ಇವರು, ಹಲವು ಸಂಸ್ಥೆ ಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!