BlogCrime newsGovernmentHighlightsLifestyleLocal newsOthersPoliticsState newsSuccess storiesTop StoriesTrending

ಉಡುಪಿ: ಹ್ಯಾಟ್ಸಾಪ್ ಎಸ್ಪಿ ಸಾಹೇಬ್ರೇ….. ನಿಮಗೆ ಇನ್ನೂ ಒಂದಿಷ್ಟು ಕೆಲಸ ಮಾಡೋದಿದೆ.!?

Aware others:

ಇದ್ದದ್ದು ಇದ್ದ ಹಾಗೇ… ಇದು ವಾಸ್ತವ

ಉಡುಪಿ: ಅದು ಯಾವನೇ ಇರ್ಲಿ ಐ ಡೋಂಟ್ ಕೇರ್ ಎಂದು ಉಡುಪಿ ಜಿಲ್ಲೆಗೆ ಬಂದವರೆಲ್ಲಾ ಒಂದೋ ಎಡ್ಜೆಸ್ಟ್ಮೆಂಟ್ ಮಾಡ್ಕೊಂಡು ಒಂದಷ್ಟು ವರ್ಷ ಇದ್ದು ಹೊರ್ಟೋಗಿದ್ದಾರೆ. ಇನ್ನು ಕೆಲವರು ಎಡ್ಜೆಸ್ಟೇ ಆಗದೇ ವರ್ಗಾವಣೆಯಾಗಿದ್ದಾರೆ. ಇದು ಉಡುಪಿ ಪೊಲಿಟಿಕ್ಸ್. ಕರಾವಳಿ ಜಿಲ್ಲೆಯ ಸ್ಪೆಷಾಲಿಟಿಯೇ ಹಾಗಿನದ್ದು. ಆದ್ರೆ ಉಡುಪಿಯಲ್ಲಿ ಈಗಿರುವ ಎಸ್ಪಿ ಸಾಹೇಬ್ರು ಮಾತ್ರ ಡಿಫರೆಂಟ್ ಸ್ಟೈಲ್ ನಲ್ಲಿ ಕಾನೂನು ಕಾಪಾಡ್ತಿರೋದು ಮಾತ್ರ ರಿಯಲೀ ಗ್ರೇಟ್.

ಹೌದು ಅವರೇ ಕೆ. ಅರುಣ್ ಕುಮಾರ್, ಉಡುಪಿ ಜಿಲ್ಲಾ ಸೂಪರಿಂಟೆಂಡೆಂಟ್ ಆಫ್ ಪೊಲೀಸ್. ಐ ಡೋಂಟ್ ಕೇರ್ ಎನ್ನುತ್ತಲೇ ಯಾವನಿಗೂ ಕ್ಯಾರೇ ಎನ್ನದೇ ಕಳೆದ ಇಷ್ಟು ದಿನಗಳೂ ಅಕ್ರಮ ದಂಧೆಕೋರರಿಗೆ, ಸ್ಮಗ್ಲರ್ಸ್ ಗೆ, ಇಲ್ಲೀಗಲ್ ಆಕ್ಟಿವಿಟೀ ಮಾಡೋರಿಗೆ ಸಿಂಹ ಸ್ವಪ್ನವಾಗಿರೋದು ಸುಳ್ಳಲ್ಲ. ಇಷ್ಟೇ ಅಲ್ಲ, ಇಂತಹಾ ಕತರ್ನಾಕ್ ಗಳಿಗೆ ಸಪೋರ್ಟ್ ಮಾಡೋ ಪೊಲೀಸರನ್ನೂ ಕ್ಯಾರೇ ಎನ್ನದೇ ಯಾವ ಪೊಲಿಟಿಕಲ್ ಇನ್ ಫ್ಲುಯೆನ್ಸಿಗೂ ಬಗ್ಗದೇ ಸಸ್ಪೆಂಡ್ ಮಾಡ್ತಾ ಇರೋದು ಸಡನ್ನಾಗಿ ಇಲ್ಲೀಗಲ್ ಮಾಡೋರಿಗೆ ಹತ್ತು ಸಲ ಆಲೋಚಿಸುವಂತೆ ಮಾಡಿದ್ದೂ ಸುಳ್ಳಲ್ಲ.

ಪತ್ರಕರ್ತರೂ ಒಂದು ಸಲ ಗಕ್ಕನೇ ನಿಂತು ಮುಂದಕ್ಕೆ ಹೋಗಬೇಕಾದ ಝಲಕ್ ನೀಡಿದ ಉಡುಪಿ ಜಿಲ್ಲೆಯ ಮೊದಲ ಎಸ್ಪಿ ಕೆ ಅರುಣ್ ಕುಮಾರ್.  ಪ್ರಾಮಾಣಿಕ ಪತ್ರಕರ್ತರಿಗೆ ಎಲ್ಲೋ ಒಂದು ಕಡೆ ಮುಜುಗರ ನೀಡುತ್ತಾ, ಪತ್ರಿಕೋದ್ಯಮವೇ ಬೇಡಪ್ಪಾ ಎನ್ನುತ್ತಿದ್ದ ಕಾಲದಲ್ಲಿ ಇಲ್ಲೀಗಲ್ ಪತ್ರಕರ್ತರಿಗೂ ಚಳಿಜ್ವರ ಹುಟ್ಟಿಸಿ, ಪ್ರಾಮಾಣಿಕರಿಗೆ ನಂಬಿಕೆ ನೀಡಿದ ಎಸ್ಪಿ ಅರುಣ್ ಕುಮಾರ್.

ಇನ್ನು ಇಡೀ ಜಿಲ್ಲೆ ನಂದೇ ಎನ್ನುತ್ತಿದ್ದವರ ಸ್ವರ ಈಗ ಕಡಿಮೆ ಆಗಿದೆ. ಆದರೆ ಅವ ಕೊಟ್ರೂ ಇವ ಬಿಡ ಎನ್ನುವಂತೆ ಎಸ್ಪಿ ಸಾಹೇಬ್ರು ಎಷ್ಟೇ ನೇರ ಇದ್ದರೂ ತಳಮಟ್ಟದಲ್ಲಿ ಎಷ್ಟು ಪ್ರಾಮಾಣಿಕರಿದ್ದಾರೆ ಎನ್ನುವ ಪ್ರಶ್ನೆ ಸಾರ್ವಜನಿಕ ಕ್ಷೇತ್ರದಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಜಿಲ್ಲೆಯಲ್ಲಿ ಗೋ ಕಳ್ಳತನ, ಅಕ್ರಮ ಮರಳುಗಾರಿಕೆ, ಕಲ್ಲು, ಶಿಲೆಗಲ್ಲು ಗಣಿಗಾರಿಕೆ ಎಗ್ಗಿಲ್ಲದೇ ಕದ್ದು ಮುಚ್ಚಿ ನಡೆಯುತ್ತಿದೆ. ಹೊರಜಿಲ್ಲೆಗಳಿಂದ ಉಡುಪಿ ಜಿಲ್ಲೆಯೊಳಕ್ಕೆ ಅಕ್ರಮವಾಗಿ ಬರುತ್ತಿರುವ ಗಾಂಜಾ ಮೊದಲಾದ ಮಾದಕ ವಸ್ತುಗಳಿಗೆ ಕಡಿವಾಣ ಹಾಕುವಲ್ಲಿ ಸ್ಥಳೀಯ ಪೊಲೀಸರು ವಿಫಲರಾಗಿದ್ದಾರೋ ಅಥವಾ ಎಡ್ಜೆಸ್ಟ್ಮೆಂಟ್ ಮಾಡಿಕೊಳ್ಳುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಬೈಂದೂರು ಹಾಗೂ ಕುಂದಾಫುರದ ಕೆಲವು ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳು ಸದ್ಧು ಮಾಡುತ್ತಿವೆ ಎನ್ನುವುದು ಇತ್ತೀಚಿನ ಒಂದು ಘಟನೆಯಿಂದ ಬಹಿರಂಗಗೊಂಡಿದೆ. ಶಿಕ್ಷಣ ಇಲಾಖೆಯೂ ಈ ಬಗ್ಗೆ ವರದಿ ಸಲ್ಲಿಸಿ ತಿಂಗಳು ಕಳೆದರೂ ನಿರ್ಲಕ್ಷ್ಯ ವಹಿಸಿರುವುದರ ಹಿಂದೆ ಏನು ನಡೆಯುತ್ತಿದೆ ಎನ್ನುವ ಕುತೂಹಲ ಮೂಡುವಂತಾಗಿದೆ.

ಒಟ್ಟಾರೆಯಾಗಿ ಉಡುಪಿ ಜಿಲ್ಲೆಯ ಸಾರ್ವಜನಿಕ ಕ್ಷೇತ್ರದಲ್ಲಿ ಭೇಷ್ ಎನ್ನಿಸಿಕೊಳ್ಳುತ್ತಿರುವ ಎಸ್ಪಿ ಸಾಹೇಬ್ರು, ತಮ್ಮ ಇಲಾಖೆಯಲ್ಲಿ ರಾಜಕೀಯ ಮತ್ತು ಹಣದ ಕೈಗೊಂಬೆಗಳಂತಿರುವ ಕೆಲವು ಕಿರಿಯ ಅಧಿಕಾರಿಗಳನ್ನು, ಸಿಬ್ಬಂದಿಗಳನ್ನು ಹುಡುಕಿ ತೆಗೆದು ಕಿವಿ ಹಿಂಡುವ ಕೆಲಸ ಮಾಡಿಬಿಟ್ರೆ ಉಡುಪಿ ಜಿಲ್ಲೆ ಪರ್ಮನೆಂಟಾಗಿ ಕ್ಲೀನ್ ಡಿಸ್ಟ್ರಿಕ್ಟ್ ಆಗೋದ್ರಲ್ಲಿ ಅನುಮಾನ ಇಲ್ಲ.


Aware others:

Leave a Reply

Your email address will not be published. Required fields are marked *

error: Content is protected !!