ನಾಗೂರು: ನಿಲ್ಲಿಸಿದ ಸ್ಕೂಟರಿಗೆ ಡಿಕ್ಕಿಯಾಗಿ ಕಾರು ಪಲ್ಟಿ – ಚಾಲಕಗೆ ಗಂಭೀರ ಗಾಯ
ಕುಂದಾಪುರ: ನಿಲ್ಲಿಸಲಾಗಿದ್ದ ಸ್ಕೂಟರ್ ಒಂದಕ್ಕೆ ಕಾರು ಒಂದು ಡಿಕ್ಕಿ ಹೊಡೆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಟ್ಟಿಯಾಗಿ ಕೌಚಿ ಬಿದ್ದ ಘಟನೆ ಶನಿವಾರ ಸಂಜೆ ರಾತ್ರಿ ನಾಗೂರು ಬಸ್ ನಿಲ್ದಾಣದ ಸಮೀಪದ ಇಸ್ತ್ರಿ ಅಂಗಡಿ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.


ಕಿರಿಮಂಜೇಶ್ವರ ಗ್ರಾಮದ ವ್ಯಕ್ತಿ ಒಬ್ಬರು ನಾಗೂರಿನ ರಸ್ತೆ ಬದಿಯ ಇಸ್ತ್ರಿ ಅಂಗಡಿಗೆ ಕೊಟ್ಟಿದ್ದ ಬಟ್ಟೆಯನ್ನು ತೆಗೆದುಕೊಳ್ಳಲೆಂದು ತನ್ನ ಸ್ಕೂಟಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಅಂಗಡಿಗೆ ಹೋಗಿದ್ದರು. ಇದೇ ಸಂದರ್ಭ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕಾರು ಅಲ್ಲಿಯ ನಿಲ್ಲಿಸಿದ್ದ ಸ್ಕೂಟರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಗಾಯಗೊಂಡ ಕಾರು ಚಾಲಕನ ವಿವರ ತಿಳಿದುಬಂದಿಲ್ಲ.

ಬಸ್ ನಿಲ್ದಾಣದ ಸಮೀಪವೆ ಅಪಘಾತ ಸಂಭವಿಸಿದ್ದು ಆದರೆ ಅದೃಷ್ಟವಶಾತ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಯಾರು ಇಲ್ಲದೆ ಇದ್ದುದರಿಂದ ಹೆಚ್ಚಿನ ಪ್ರಕರಣ ಇನ್ನಷ್ಟೇ ದಾಖಲಾಗಬೇಕಿದೆ ಹೆಚ್ಚಿನ ಮಾಹಿತಿ ತನಿಖೆಯ ಬಳಿಕ ಬಹಿರಂಗಗೊಳ್ಳಲಿದೆ.