ಹಟ್ಟಿಯಂಗಡಿ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ – ರಿಷಿಕಾ ದೇವಾಡಿಗ ಪ್ರಥಮ
ಕುಂದಾಪುರ: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು (ರಿ) ಮೈಸೂರು ಸಹಯೋಗದೊಂದಿಗೆ ಕಲಾವಿದ ಶಿಕ್ಷಕರ ಸಮಿತಿ ಆಯೋಜಿಸಿದ ರಾಜ್ಯ ಮಟ್ಟದ “2047 ರ ನನ್ನ ಕನಸಿನ ಭಾರತ” ಈ ವಿಷಯದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ಒಂಭತ್ತನೆಯ ತರಗತಿಯ ವಿದ್ಯಾರ್ಥಿನಿ ಕು. ರಿಷಿಕಾ ದೇವಾಡಿಗ ಪ್ರಥಮ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತಿನ ಸ್ಥಾಪಕಾಧ್ಯಕ್ಷ ಪಿ. ಮಹೇಶ್ ಪ್ರತಿಕ್ರಿಯಿಸಿ, ರಿಷಿಕಾಳ ಬರವಣಿಗೆಯ ಕೌಶಲ್ಯವನ್ನು ಕೊಂಡಾಡಿದರು. ಭಾರತದ ಬಗ್ಗೆ ಕನಸು ಕಂಡು, ಈ ಸ್ಪರ್ಧೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ವಿದ್ಯಾರ್ಥಿಗಳು ಪ್ರಬಂಧ ರಚಿಸಿದ್ದು, ವಿದ್ಯಾರ್ಥಿಗಳ ಸೃಜನಶೀಲತೆ ಮತ್ತು ಬೌದ್ಧಿಕ ಬೆಳವಣಿಗೆಗೆ ಸಹಾಯಕವಾದ ಮಕ್ಕಳ ರಚನೆಯ ಈ ಎಲ್ಲಾ ಪ್ರಬಂಧಗಳನ್ನು ಇ ಪುಸ್ತಕ ಮಾಡಿ ಪ್ರಕಟಿಸಲಾಗುವುದು ಎಂದರು. ಕಲೆ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ರಿಷಿಕಾ, ಈಗಾಗಲೇ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಮೂಡಿಗೇರಿಸಿ ಕೊಂಡಿದ್ದಾರೆ.