ಜಾಗದ ತಕರಾರು – ಹಲ್ಲೆ
ಕುಂದಾಪುರ: ಆಸ್ತಿ ವಿಚಾರದಲ್ಲಿದ್ದ ತಕರಾರಿಗೆ ಮಹಿಳೆಯರನ್ನು ರಸ್ತೆ ಮೇಲೆಯೇ ಹೊಡೆದು ಹಲ್ಲೆ ನಡೆಸಿದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಾಲ್ತೋಡು ಗ್ರಾಮದ ಮೆಟ್ಟಿನಹೊಳೆ ಎಂಬಲ್ಲಿ ನಡೆದಿದೆ. ಬೆಂಗಳೂರಿನಲ್ಲಿರುವ ಅಂಬಿಕಾ ಎಂಬುವರು ತನ್ನ ತಾಯಿಯ ಜೊತೆಗೆ ತಾಯಿಯ ಆಸ್ತಿಯಿರುವ ಮೆಟ್ಟಿನ ಹೊಳೆಗೆ ಹೋದಾಗ ತಾಯಿಯ ಅಣ್ಣ ಶಿವ ಯಾನೆ ಕರಿಯ ಹಾಗೂ ಆತನ ಅಳಿಯ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಅಂಬಿಕಾ ಬೈಂದೂರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.