BlogEconomyGovernmentHealthHighlightsHuman storiesLifestyleLocal newsOthersPoliticsProtestState newsTechTop StoriesTrendingWomen Care

ಬ್ರಹ್ಮಾವರ: ಆಡಳಿತ ಸೌಧದಲ್ಲಿ ಕೈಕೊಟ್ಟ ಲಿಪ್ಟ್ – ತಿಂಗಳಾದರೂ ದುರಸ್ಥಿಗೆ ಮನಮಾಡಿಲ್ಲ ಆಡಳಿತ! ಸಂಕಷ್ಟದಲ್ಲಿ ಜನಸಾಮಾನ್ಯರು

Aware others:

ಬ್ರಹ್ಮಾವರ: ತಾಲೂಕು ಕೆಂದ್ರವಾದ ತಾಲ್ಲೂಕು ಆಡಳಿತ ಸೌಧದ ಗೋಳು ಕೇಳುವವರಾರು? ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.  ಲಿಫ್ಟ್ ಕೈಕೊಟ್ಟು ತಿಂಗಳು ಕಳೆಯುತ್ತಾ ಬಮದರೂ ಇಲ್ಲಿನ ಆಡಳಿತ ಯಂತ್ರವೂ ತುಕ್ಕು ಹಿಡಿದ ಪರಿಣಾಮ ಲಿಪ್ಟ್ ದುರಸ್ತಿ ಭಾಗ್ಯ ಇನ್ನೂ ಬಂದಿಲ್ಲ.

ಆಡಳಿತ ಸೌಧದ ಪ್ರಥಮ ಮಹಡಿಯಲ್ಲಿರುವ ಉಪನೋಂದಣಿ ಕಚೇರಿಗೆ ಪ್ರತಿನಿತ್ಯ ಹಿರಿಯ ಜೀವಗಳನ್ನು ಮೆಟ್ಟಿಲಿನ ಮೂಲಕ ಹೊತ್ತು ತರುವ ದೃಶ್ಯ ಅಸಹನೀಯವೆನಿಸಿದೆ. ಲಿಫ್ಟ್ ದುರಸ್ತಿ ಮಾಡುವ ಸಾಮರ್ಥ್ಯವಿರದ ಸರ್ಕಾರಕ್ಕೆ ಜನಸಾಮಾನ್ಯರು ಪ್ರತಿ ದಿನ ಶಾಪ ಹಾಕುತ್ತಿದ್ದಾರೆ. ಜನ ಓಡಾಟ ಇಲ್ಲದ ಚುನಾವಣಾ ಶಾಖೆಯನ್ನು ನೆಲ ಅಂತಸ್ತಿನಲ್ಲಿ ಇರಿಸಿ, ಪ್ರತಿ ದಿನ ಸಾವಿರಾರು ಜನ ಭೇಟಿ ನೀಡುವ ಉಪನೊಂದಣಿ ಕಚೇರಿಯನ್ನು ಮೊದಲ ಮಹಡಿಯಲ್ಲಿ ಪ್ರಾರಂಭಿಸಿರುವುದು ಅವೈಜ್ಞಾನಿಕವಾಗಿರುವುದಂತೂ ಸತ್ಯ.

ಈ ಬಗ್ಗೆ ಆಕ್ರೋಶ ಹೊರಹಾಕಿರುವ ಬ್ರಹ್ಮಾವರದ ವಕೀಲ ಅಲ್ತಾರು ಗೌತಮ್ ಹೆಗ್ಡೆ, ಜಿಲ್ಲಾಡಳಿತ ಈ ಕೂಡಲೇ ಲಿಫ್ಟ್ ಸರಿಪಡಿಸಿ  ಶೀಘ್ರ ಕ್ರಮಕೈಗೊಳ್ಳದೆ ಹೋದಲ್ಲಿ ಅನಿವಾರ್ಯವಾಗಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!