BlogEducationFashionGovernmentHighlightsHuman storiesLifestyleLocal newsOthersState newsTop StoriesTrending

ಕೋಟೆ ಬಾಗಿಲು: ನಿವೃತ್ತ ಶಿಕ್ಷಕ ವಿಠಲಕಾಮತ್ ಗೆ ಸನ್ಮಾನ

Aware others:

ಕುಂದಾಪುರ : ಇತ್ತೀಚೆಗೆ ನಿವೃತ್ತರಾದ ಶಾಲಾ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು ಸನ್ಮಾನಿಸುವ ಮೂಲಕ ಗೌರವ ತೋರಿದ್ದಾರೆ. ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಲವಿಕಾಸ ಅಂಗನವಾಡಿ ಕೇಂದ್ರ, ಕೋಟೆಬಾಗಿಲು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೋಟೆಬಾಗಿಲು ತಲ್ಲೂರು ಶಾಲೆಯಲ್ಲಿ ಮಕ್ಕಳ ದಿನಾಚರಣೆಯಂದು ನಿವೃತ್ತ ಶಿಕ್ಷಕ ವಿಠಲ ಕಾಮತ್ ಇವರನ್ನು ಬಾಲವಿಕಾಸ ಅಂಗನವಾಡಿ ಕೇಂದ್ರ ಕೋಟೆಬಾಗಿಲು ಇವರಿಂದ ಸನ್ಮಾನಿಸಿ ಗೌರವಿಸಲಾಯಿತು.

ಸಂದರ್ಭದಲ್ಲಿ ಕುಂದಾಪುರ ತಹಶೀಲ್ದಾರ್ ಶೋಭಾಲಕ್ಷ್ಮೀ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಡಾ. ಉದಯಕುಮಾರ್, ತಲ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಚಂದ್ರಮತಿ ಹೆಗ್ಡೆ, ಬಾಲವಿಕಾಸ ಅಂಗನವಾಡಿ ಕೇಂದ್ರದ ಅಧ್ಯಕ್ಷೆ ಶಿಲ್ಪ, ಅಂಗನವಾಡಿ ಶಿಕ್ಷಕಿ ಜ್ಯೋತಿ, .ಕಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಜೂಲಿಯಾನ ಡಾಯಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ರೇಶ್ಮಾ, ಉಪಾಧ್ಯಕ್ಷ ಶ್ವೇತಾ, ಶಾಲಾ ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೇಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

 ಶಾಲಾ ಮುಖ್ಯ ಶಿಕ್ಷಕಿ ಜೂಲಿಯಾನ ಡಾಯಸ್ ಸ್ವಾಗತಿಸಿದರು. ಶಾಲಾ ನಾಯಕಿ ಕು| ಗಾವಿನ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ರಾಜೇಶ್ವರಿ ಮತ್ತು ಪ್ರಿಯಾಂಗ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!