BlogEducationEntertainmentFashionHealthHighlightsLifestyleLocal newsOthersSportsState newsTop StoriesTrending

ಆನೆಗುಡ್ಡೆ : ಸೈಕಲ್‌ಜಾಥ “ಯೋಧ -2024” ಲಾಂಛನ ಲೋಕಾರ್ಪಣೆ

Aware others:

ಕುಂದಾಪುರ: ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ , ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ(ರಿ.) ಕುಂದಾಪುರ, ಎಂ.ಜಿ. ಫ್ರೆಂಡ್ಸ್ , ಕುಂಭಾಶಿ, ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗ ದಳ  ತೆಕ್ಕಟ್ಟೆ ಘಟಕ, ಸೈಕಲ್ ಅಸೋಸಿಯೇಶನ್ ಕುಂದಾಪುರ ಇವರ ಸಹಯೋಗದೊಂದಿಗೆ ವಿಶ್ವ ಹೃದಯ ದಿನದ ಅಂಗವಾಗಿ ಸೆಪ್ಟಂಬರ್ 29ರಂದು ನಡೆಯಲಿರುವ ಸುಮಾರು 10 ಕಿ.ಮೀ. ಸೈಕಲ್‌ ಜಾಥ “ಯೋಧ -2024” ಇದರ ಲಾಂಛನವನ್ನು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಅವರು ಆಗಸ್ಟ್ 29ರಂದು ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅನಾವರಣಗೊಳಿಸಿದರು.

ಈ ಸಂದರ್ಭ ಗೀತಾನಂದ ಫೌಂಡೇಶನ್ ನ ಪ್ರವರ್ತಕ ಆನಂದ ಸಿ.ಕುಂದರ್ ಅವರು ಟೀ ಶರ್ಟ್ (ಜೆರ್ಸಿ) ಅನಾವರಣಗೊಳಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ರವಿಕಿರಣ್ ಮುರುಡೇಶ್ವರ, ಕುಂಭಾಶಿ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ, ಹಿರಿಯ ಗ್ರಾ.ಪಂ. ಸದಸ್ಯೆ ರಾಧಾದಾಸ್, ಕೆ.ರವಿರಾಜ್ ಉಪಾಧ್ಯಾಯ, ಪರ್ಯಾಯ ಅರ್ಚಕ ಕೆ.ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ದೇಗುಲದ ವ್ಯವಸ್ಥಾಪಕ ನಟೇಶ್ ಕಾರಂತ್ ತೆಕ್ಕಟ್ಟೆ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಕುಂದಾಪುರ ಸೈಕಲ್ ಅಸೋಸಿಯೇಶನ್ ನ ಪ್ರವೀಣ್, ವಿಶ್ವಹಿಂದೂ ಪರಿಷತ್ ಹಾಗೂ ‘ಭಜರಂಗ ದಳ ದ ತಾಲೂಕು ಸಹ ಸಂಚಾಲಕ ಶ್ರೀನಾಥ ಶೆಟ್ಟಿ ಮೇಲ್ತಾರುಮನೆ , ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ,, ಆನ್‌ಲೈನ್ ಪಾರ್ಟನರ್ ಗೌತಮ್ ನಾವಡ , ಪಿಡಬ್ಲ್ಯುಡಿ ಗುತ್ತಿಗೆದಾರ ಅರ್ಜುನ್‌ದಾಸ್, ಎಂಜಿನಿಯರ್ ಶ್ರೀನಿಧಿ ಉಪಾಧ್ಯಾಯ , ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಟ್ರಸ್ಟಿ ಡಾ. ಮುರಳಿಕೃಷ್ಣ ಭಟ್, ಮೋಹನ್‌ಕೃಷ್ಣ ಭಟ್, ಕೌಶಿಕ್ ದೇವಾಡಿಗ , ರವಿಕುಮಾರ್ ಶೆಟ್ಟಿ , ಡಾ. ಹೇಮಾ, ಡಾ. ಅಖಿಲ್, ಡಾ. ಪ್ರತಾಪ್ ಮತ್ತಿತರರು ಉಪಸ್ಥಿತರಿದ್ದರು. ಕುಂದಾಪುರ ರೂರಲ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಎಸ್.ಜಿ.ಪ್ರಸನ್ನ ಐತಾಳ್ ಸ್ವಾಗತಿಸಿ, ಡಾ. ಸವಿತಾ ಪ್ರಸನ್ನ ಐತಾಳ್ ವಂದಿಸಿದರು.


Aware others:

Leave a Reply

Your email address will not be published. Required fields are marked *

error: Content is protected !!