ಕುಂದಾಪುರ: ಕ್ರೈಸ್ತರ ಪವಿತ್ರ ಸ್ಥಳ ವೆಲಾಂಕಣಿ ವಿಶೇಷ ರೈಲಿಗೆ ಕೋಟ ಸೂಚನೆ
ಕುಂದಾಪುರ: ಕ್ರೈಸ್ತ ಸಮುದಾಯದ ಪವಿತ್ರ ಯಾತ್ರಾ ಸ್ಥಳ ವೆಲಂಕಣಿಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ “ವೆಲಾಂಕಣಿ ಪೆಸ್ಟಿವಲ್” ಪ್ರಯುಕ್ತ ಕರ್ನಾಟಕ ಮತ್ತು ಗೋವಾ ಕರಾವಳಿ ಭಾಗದವರಿಗೆ ಮಡಗಾಂವ್ ವೆಲಾಂಕಣಿ ನಡುವೆ ವಿಶೇಷ ರೈಲು ಸಂಚಾರಕ್ಕೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದ್ದಾರೆ.



ಕುಂದಾಪುರ ರೈಲು ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್ ನೇತೃತ್ವದಲ್ಲಿ ಕುಂದಾಪುರ ಭಾಗದ ಸ್ಥಳೀಯರು ಮಾಡಿದ ಮನವಿಯನ್ನು ಪರಿಗಣಿಸಿದ ಸಂಸದರು, ಕಳೆದ ವಾರ ನಡೆದ ಕೊಂಕಣ ರೈಲ್ವೆ ಆಡಳಿತ ನಿರ್ದೇಶಕರ ಜತೆ ಸಭೆ ನಡೆಸಿದ್ದು, ಈ ಬಗ್ಗೆ ಸ್ಪಷ್ಟ ಸೂಚನೆ ರವಾನಿಸಿದ್ದಾರೆ. ಸದ್ಯದಲ್ಲೇ ರೈಲಿನ ಘೋಷಣೆ ಹೊರ ಬರುವ ಸಾದ್ಯತೆ ಇದೆ ಎಂದು ತಿಳಿದು ಬಂದಿದೆ.