Crime newsBlogEconomyHighlightsHuman storiesLocal newsOthersTop StoriesTrending

ಬ್ರಹ್ಮಾವರ: ಪೈನಾನ್ಸ್ ಚಿನ್ನವನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿ 75 ಲಕ್ಷ ವಂಚನೆ

Aware others:

ಬ್ರಹ್ಮಾವರ: ಫೈನಾನ್ಸಿನಲ್ಲಿ ಹಾರಜಿಗೆ ಬಂದ ಚಿನ್ನವನ್ನು  ಕಡಿಮೆ ಬೆಲೆಯಲ್ಲಿ ಕೊಡಿಸುವುದಾಗಿ ನಂಬಿಸಿ ಹಲವರಿಂದ ಒಟ್ಟು 75 ಲಕ್ಷ ಪೀಕಿಸಿದ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣದ ಆರೋಪಿಗಳಾದ ಸುವಾಸಿನಿ ಮತ್ತು ಅವರ ಸಹೋದರ ವಾದಿರಾಜ ಎಂಬುವರೇ ಮೋಸ ಮಾಡಿದವರು. ಮಣಿಪಾಲದ ಸಿಟಿಕಾರ್ಪ್‌ ಫೈನ್ಯಾನ್ಸ್‌ ಎಂಬ ಹಣಕಾಸು ಸಂಸ್ಥೆಯಿಂದ ಹರಾಜಿನ ಮೂಲಕ ಪಡೆದ ಚಿನ್ನವನ್ನು ಕಡಿಮೆ ಬೆಲೆಗೆ ಕೊಡಿಸುವುದಾಗಿ ನಂಬಿಸಿದ್ದಾರೆ. ಬಳಿಕ 2023ರ ಡಿಸೆಂಬರ್ 11ರಿಂದ ಡಿಸೆಂಬರ್ 16ರ ವರೆಗೆ ಹಂತ ಹಂತವಾಗಿ ಬ್ರಹ್ಮಾವರದ ನಡೂರು ಗ್ರಾಮದ ನಿತ್ಯಾನಂದ (64) ಹಾಗೂ ಇತರರಿಂದ ಮತ್ತೊಬ್ಬ ಆರೋಪಿ ನಿಶಾಂತ ಮನೋಹರ ರವರ ಮೂಲಕ KA.20.D.7991 ನೊಂದಣಿ ನಂಬ್ರದ ಕಾರಿನಲ್ಲಿ 75 ಲಕ್ಷ ಹಣವನ್ನು ಪಡೆದುಕೊಂಡು ಹೋಗಿದ್ದರು.

ತಿಂಗಳುಗಳು ಕಳೆದರೂ ಹಣವಾಗಲೀ ಚಿನ್ನವಾಗಲೀ ವಾಪಾಸ್ಸು ಬರದೇ ಇದ್ದಾಗ ಪ್ರಶ್ನೆ ಮಾಡಿದ್ದಕ್ಕೆ ಮೂವರು ಆರೋಪಿಗಳು ಬೆದರಿಕೆ ಹಾಕಿರುವುದಾಗಿ  ಬ್ರಹ್ಮಾವರ ಪೊಲಿಸ್ ಠಾಣೆಯಲ್ಲಿ ನಿತ್ಯಾನಂದ ಎಂಬುವರು ದೂರು ದಾಖಲಿಸಿದ್ದಾರೆ.


Aware others:

Leave a Reply

Your email address will not be published. Required fields are marked *

error: Content is protected !!