ಮರವಂತೆ: ಅಂಚೆಕಚೇರಿಗೆ ನುಗ್ಗಿದ ಕಳ್ಳರು ಬರಿಗೈಲಿ ವಾಪಾಸ್ಸಾದರು!
ಕುಂದಾಫುರ: ಇಲ್ಲಿನ ಮರವಂತೆಯ ಅಂಚೆ ಕಚೇರಿಗೆ ಬೀಗಮುರಿದು ಒಳನುಗ್ಗಿದ ಕಳ್ಳರು ಕಪಾಟು, ಗೋದ್ರೇಜುಗಳನ್ನು ಜಾಲಾಡಿ ಚೆಲ್ಲಾಪಿಲ್ಲಿಗೊಳಿಸಿ ಬರಿಗೈಯಲ್ಲಿ ವಾಪಾಸ್ಸಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ಮರವಂತೆಯ ಅಂಚೆಕಚೇರಿಯ ಪೋಸ್ಟ್ ಮಾಸ್ಟರ್ ಹಕ್ಲಾಡಿ ಗ್ರಾಮದ ಶಿಲ್ಪಕಲಾ (32) ಅವರು ಶನಿವಾರ ಸಂಜೆ ಕೆಲಸ ಮುಗಿಸಿ ಕಚೇರಿಗೆ ಬೀಗ ಹಾಕಿ ತೆರಳಿದಿದ್ದರು. ಸೋಮವಾರ ಬೆಳಿಗ್ಗೆ ಬರುವಾಗ ಅಂಚೆ ಕಚೇರಿಯ ಬೀಗ ಒಡೆದಿರುವುದು ಬೆಳಕಿಗೆ ಬಂದಿದೆ. ಶನಿವಾರ ರಾತ್ರಿಯಿಂದ ಸೋಮವಾರ ಮುಂಜಾನೆ ನಡುವೆ ಘಟನೆ ನಡೆದಿದ್ದು, ಪೋಸ್ಟ್ ಆಪೀಸ್ನ ಒಳಗೆ ಪ್ರವೇಶಿಸಿ ಪೋಸ್ಟ್ ಆಫೀಸ್ ನಲ್ಲಿದ್ದ ಗೋಡ್ರೆಜ್, ಕಪಾಟುಗಳನ್ನು ಅಸ್ತವ್ಯಸ್ಥ ಮಾಡಿ ಕಳ್ಳತನ ಮಾಡಲು ಪ್ರಯತ್ನಿಸಿ ವಾಪಾಸ್ಸಾಗಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.