ತೆಗ್ಗರ್ಸೆ: ಕುಸಿದುಬಿದ್ದ ತಡೆಗೋಡೆ, ಗದ್ದೆಗೆ ನುಗ್ಗಿದೆ ನೀರು – ಪರಿಹಾರಕ್ಕೆ ಆಗ್ರಹ
ಕುಂದಾಪುರ: ವಿಪರೀತ ಮಳೆಯ ಪರಿಣಾಮ ನೀರಿಗಾಗಿ ಕಟ್ಟಲಾದ ತಡೆಗೋಡೆಯೇ ಕುಸಿದು ಕೃಷಿ ಭೂಮಿಗೆ ನೀರು ನುಗ್ಗಿ ಹಾನಿಯಾದ ಘಟನೆ ಬೈಂದೂರು ತಾಲೂಕಿನ ತಗರ್ಸೆಗ್ರಾಮದ ಮೂಡಣಗದ್ದೆ ಎಂಬಲ್ಲಿ ನಡೆದಿದೆ.




ಇಲ್ಲಿನ ರೈತರಾದ ಗೋಪಾಲ ಗಾಣಿಗರ ಜಮೀನಿನ ತಡೆಗೋಡೆಯನ್ನು ಲಕ್ಷಾಂತರರೂಪಾಯಿಖರ್ಚು ಮಾಡಿ ತಡೆಗೋಡೆ ನಿರ್ಮಿಸಿದ್ದರು. ಆದರೆ ಭಾರೀ ಮಳೆಯಿಂದ ತಡೆಗೋಡೆ ಸಂಪೂರ್ಣ ಕುಸಿದುಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ನಷ್ಟವುಂಟಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಪರಿಹಾರ ದೊರಕಿಸಿಕೊಡಬೇಕು ಎಂದು ವೀರಭದ್ರ ಗಾಣಿಗ ಆಗ್ರಹಿಸಿದ್ದಾರೆ.
