ಕುಂದಾಪುರ: ಕೃಷಿಮೇಳದಲ್ಲಿ ಕೃಷಿ ಸಾಧಕರಿಗೆ ಸನ್ಮಾನ
ಕುಂದಾಪುರ ಲಯನ್ಸ್ ಕ್ಲಬ್ ಕ್ರೌನ್ ವತಿಯಿಂದ ಕುಂದಾಪುರ ನೆಹರು ಮೈದಾನದಲ್ಲಿ ನಡೆಯುತ್ತಿರುವ ಕೃಷಿ ಮತ್ತು ಹಲಸು ಮೇಳದ ಸಮಾರಂಭದ ವೇದಿಕೆಯಲ್ಲಿ ಕೃಷಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಮಂಜುನಾಥ ಕೃಷಿಕರಾದ ರಾಜೇಂದ್ರ ಪೂಜಾರಿ ಬೆಚ್ಚಳ್ಳಿ, ಸತೀಶ್ ಶೆಟ್ಟಿ ಅಮಾಸೆಬೈಲ್, ದೇವಿಪ್ರಸಾದ್ ಶೆಟ್ಟಿ ಯಡಮೊಗ್ಗೆ, ಕೆ.ಬಾಬು ಶೆಟ್ಟಿ ಮಂದಾರ್ತಿ, ಕರುಣಾಕರ ಶೆಟ್ಟಿ ಕೆದೂರು, ಗಣೇಶ್ ನಾಯಕ್ ಎಡಮೊಗೆ, ಮಹಾಬಲ ಎನ್ ಬೈಂದೂರು ಅವರನ್ನು ಸನ್ಮಾನಿಸಿದರು.
ಲಯನ್ಸ್ ಕ್ಲಬ್ ಕ್ರೌನ್ ಅದ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ನಿಯೋಜಿತ ಅದ್ಯಕ್ಷ ದಿನಕರ್ ಶೆಟ್ಟಿ, ಕಾರ್ಯದರ್ಶಿ ಶ್ರೀಧರ್ ಮರವಂತೆ, ಕೋಶಾಧಿಕಾರಿ ಜಗದೀಶ್ ವಾಸುದೇವ್ ಮೊದಲಾದವರು ಉಪಸ್ಥಿತರಿದ್ದರು.
