ಕುಂದಾಪುರದ ಫೋಟೋಗ್ರಾಫರ್ ಮುಂಬೈನಲ್ಲಿ ಸಾವು

ಕುಂದಾಪುರ :ವಿಡಿಯೋ ಗ್ರಾಫರ್ ಹಾಗೂ ಡೆಕೋರೇಟರ್ ಆಗಿ ಕುಂದಾಪುರದಲ್ಲಿ ವೃತ್ತಿ ಮಾಡುತ್ತಿದ್ದ ಬರೆಕಟ್ಟು ನಿವಾಸಿ ಅಭಿನಂದನ್(49) ಯಾನೆ ಅಭಿ ಮುಂಬಯಿಗೆ ತೆರಳಿ ಮಿತ್ರನ ಮನೆಯಲ್ಲಿ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕುಂದಾಪುರದ ಪ್ರಸಿದ್ಧ ಕಲಾತ್ಮಕ ಫೋಟೋಗ್ರಾಫರ್ ರಾಮಚಂದ್ರರವರ ಪುತ್ರ ಅಭಿನಂದನ್
ಕೆಲದಿನಗಳ ಹಿಂದೆ ಮುಂಬಯಿಗೆ ಕೆಲಸ ನಿಮಿತ್ತ ತೆರಳಿದ್ದ ಹೃದಯರೋಗ ಸಮಸ್ಯೆ ಇತ್ತು. ಶನಿವಾರ ಬೆಳಿಗ್ಗೆ ಮಿತ್ರರ ಮನೆಯಲ್ಲಿ ಮಲಗಿದ್ದಲ್ಲೇ ಕೊನೆಯುಸಿರೆಳೆದಿದ್ದಾರೆ. ಅವಿವಾಹಿತ ಅಭಿ ಇಬ್ಬರು ಸಹೋದರಿಯರು ಹಾಗೂ ಮಿತ್ರ ವರ್ಗದವರನ್ನು ಅಗಲಿದ್ದಾರೆ.
