ಸ್ವಾಮೀಜಿ ಭವಿಷ್ಯ ನಿಜವಾದರೆ ಪ್ರಿಯಾಂಕಾ ಮುಂದಿನ ಪ್ರದಾನಿ!?

ತುಮಕೂರು: ತಿಪಟೂರು ತಾಲ್ಲೂಕಿನ ನೊಣವಿನಕೆರೆ ಯಶ್ವಂತಗುರೂಜಿ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ. ಸ್ವಾಮೀಜಿ ಭವಿಷ್ಯ ನಿಜವಾದರೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಲಿದೆ ಮತ್ತು ಪ್ರಿಯಾಂಕಾ ಗಾಂಧಿ ಪ್ರದಾನಿಯಾಗಲಿದ್ದಾರೆ!
ಹೌದು, ಯಶ್ವಂತ ಗುರೂಜಿ ಹೇಳುವ ಪ್ರಕಾರ, ತಾಳೆ ಗರಿಯ ಜಾತಕ ಮತ್ತು ಕಾಲಜ್ಞಾನ ಭವಿಷ್ಯ ಹಾಗು ವಾಸ್ತವ ಸ್ಥಿತಿಗತಿಗಳ ಆಧಾರದಲ್ಲಿ ಈ ಭವಿಷ್ಯ ಹೇಳಲಾಗಿದೆ ಎನ್ನುತ್ತಾರೆ.
ಈ ಬಾರಿ ಒಬ್ಬಳು ಸ್ತ್ರೀ, ಪುರುಷನ ಎದುರು ದುರ್ಗಿಯಾಗಿ ನಿಂತು ಪುರುಷನಿಗೆ ಭಯ ಹುಟ್ಟಿಸಿ ತಾನೇ ಅಧಿಕಾರವನ್ನ ಮಾಡುವಳು. ತಾಯಿ ಮಮತೆಯಿಂದ ತನ್ನ ಅಧಿಕಾರವನ್ನು ಮಾತೃ ವಾತ್ಸಲ್ಯದಿಂದ ಪರರಿಗೆ ಬಿಟ್ಟುಕೊಡುವಳು ಎಂದು ನೊಣವಿನಕೆರೆಯ ಯಶ್ವಂತಗುರೂಜಿ ಭವಿಷ್ಯ ನುಡಿದಿದ್ದಾರೆ.
ನರೇಂದ್ರಮೋದಿಗೆ ಆರೋಗ್ಯದ ಸಮಸ್ಯೆ ಕಾಡಲಿದ್ದು, ಅಧಿಕಾರದ ಕಡೆಗೆ ಗಮನಕೊಡುವ ಬದಲು ಆರೋಗ್ಯದ ಕಡೆಗೆ ಗಮನ ಕೊಡಲಿ ಎಂದು ಸಲಹೆ ನೀಡಿದ್ದಾರೆ.
ವೀಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ 👇