ಬೆಳ್ಳಾರೆ : 108 ಆಂಬ್ಯುಲೆನ್ಸ್ ಗೆ ಪ್ರಶಾಂತ್ ರೈ ಮರುವಂಜ ದಂಪತಿಗಳಿಂದ ಟೈಯರ್ ಕೊಡುಗೆ
ವಿಶೇಷ ವರದಿ: ಪ್ರೇಂ ಬೆಳ್ಳಾರೆ
ಬೆಳ್ಳಾರೆ: ಸಂಪೂರ್ಣ ಸವೆದುಹೋದ ಸ್ಥಿತಿಯಲ್ಲಿದ್ದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರ 108 ಆಂಬ್ಯುಲೆನ್ಸ್ ವಾಹನಕ್ಕೆ ಉಚಿತವಾಗಿ ಟಯರ್ ಗಳನ್ನು ನೀಡುವ ಮೂಲಕ ಖ್ಯಾತ ಯುವ ಉದ್ಯಮಿ ವಿಷ್ಣು ಗ್ರೂಪ್ಸ್ ನ ಮಾಲಕ ಹಾಗೂ ತುಳುನಾಡ ರಕ್ಷಣಾ ವೇದಿಕೆ ಸುಳ್ಯ ಇದರ ಅಧ್ಯಕ್ಷ ಪ್ರಶಾಂತ್ ರೈ ಮರುವಂಜ ಹಾಗು ಅವರ ಪತ್ನಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಪ್ರವೀಣ ಪ್ರಶಾಂತ್ ಮರುವಂಜ ಮಾನವೀಯತೆ ಮೆರೆದಿದ್ದಾರೆ.

ತುರ್ತು ಸಂದರ್ಭದಲ್ಲಿ ಅಮೂಲ್ಯ ಜೀವ ಉಳಿಸಬೇಕಾದ ಅಂಬ್ಯುಲೆನ್ಸ್ ನ ಟೈಯರ್ ಯಾವ ಸಂದರ್ಭದಲ್ಲಿ ‘ಪಂಕ್ಚರ್’ ಆಗುತ್ತದೆ ಎಂಬುದು ಸ್ವತಃ ಡ್ರೈವರ್ಗೂ ಗೊತ್ತಿಲ್ಲ! ಇದಕ್ಕೆ ಕಾರಣ ಟೈಯರ್ ಸಂಪೂರ್ಣ ಸವೆದು ಹೋಗಿರುವುದು. ಹಲವು ತಿಂಗಳಿಂದ ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ 108 ಆಂಬ್ಯುಲೆನ್ಸ್ ಟೈಯರ್ಗಳು ಸಂಪೂರ್ಣ ಸವೆದುಹೋಗಿರುವ ಹಿನ್ನೆಲೆಯಲ್ಲಿ ಈ 108 ಸೇವೆಗೆ ಲಭ್ಯವಿಲ್ಲದಂತಾಗುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಟೈಯರ್ ಬದಲಿಸಲು ಕ್ರಮವಹಿಸಬೇಕಾದ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದರ ಪರಿಣಾಮ ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಬೇಕಾದ ರೋಗಿಗಳು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಆದರೆ ವಿಚಾರ ಗಮನಕ್ಕೆ ಬಂದ ತಕ್ಷಣ ಪ್ರಶಾಂತ್ ರೈ ದಂಪತಿಗಳು ಬಡ ರೋಗಿಗಳ ಜೀವ ಉಳಿಸುವ ಮಾನವೀಯತೆ ದೃಷ್ಟಿಯಿಂದ ಹಾಗು ಬಡರೋಗಿಗಳ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸೇವೆ ಗೆ ಬೇಕಾದ ಒಂದು ಟೈಯರ್ ನ್ನು ದಾನವಾಗಿ ನೀಡಿ ಊರವರ ಪ್ರೀತಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.