ಸ್ಕೂಟರ್ ಸ್ಕಿಡ್: ಸವಾರ ಸಾವು
ಕೋಟೇಶ್ವರ ಸಮೀಪದ ಶಿರಿಯಾರ ದಬ್ಬೆಕಟ್ಟೆ ರಸ್ತೆಯ ಕೊರ್ಗಿಯ ಪಂಚಾಯತ್ ಎದುರುಗಡೆಯಲ್ಲಿ ಜುಪಿಟರ್ ಸ್ಕೂಟರ್ ಸ್ಕಿಡ್ ಆದ ಪರಿಣಾಮ ಸವಾರ, ಕೊರ್ಗಿಯ ಕೋಣಟ್ಟು ನಿವಾಸಿ ಸಂದೀಪ್ ಶೆಟ್ಟಿ(31) ಎಂಬುವವರು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಶುಕ್ರವಾರ ರಾತ್ರಿ 8ಗಂಟೆ ಸುಮಾರಿಗೆ ಅವರು ಡ್ರೈವಿಂಗ್ ಕೆಲಸ ಮುಗಿಸಿಕೊಂಡು ಸ್ಕೂಟರಿನಲ್ಲಿ ತನ್ನ ಮನೆಗೆ ತೆರಳುತ್ತಿರುವ ಸಮಯದಲ್ಲಿ ಈ ಘಟನೆ ನಡೆದಿದೆ. ಅವಿವಾಹಿತರಾಗಿರುವ ಸಂದೀಪ್ ಶೆಟ್ಟಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
