ಡ್ರಾಪ್ ನೆಪದಲ್ಲಿ ಬೈಕ್ ಕದ್ದೊಯ್ದ!
ಕುಂದಾಪುರ: ಕಾಲುನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನಿಗೆ ಡ್ರಾಪ್ಕೊಡುವ ನೆಪ್ದಲ್ಲಿ ಆತನದೇ ಬೈಕಿನಲ್ಲಿ ಡ್ರಾಪ್ ಕೊಟ್ಟು ಬೈಕ್ ಕದ್ದೊಯ್ದ ಘಟನೆ ಕೋಟ ಪೊಲೀಸ್ ಠಾಣೆಯ ಸಾಯ್ಬ್ರಕಟ್ಟೆ ಎಂಬಲ್ಲಿ ನಡೆದಿದೆ.

ಹೆಬ್ರಿ ತಾಲೂಕಿನ ಅಲ್ಬಾಡಿ ಗ್ರಾಮದ ಸಂತೋಷ್ ಎಂಬಾತ ತನ್ನ ಪಲ್ಸರ್ ಬೈಕಿನಲ್ಲಿ ಮಣಿಪಾಲಕ್ಕೆ ಹೋಗಿದ್ದರು. ಅಲ್ಲಿ ಕೆಲಸ ಮುಗಿದ ಬಳಿಕ ವಾಪಾಸು ಬರಲು ಕಾಲು ನೋವು ಇದ್ದುದರಿಂದ ಅಲ್ಲೆ ಇದ್ದ 45 ವರ್ಷದ ಗಂಡಸಿನಲ್ಲಿ ಸೈಬ್ರಕಟ್ಟೆವರೆಗೆ ಡ್ರಾಪ್ ಮಾಡಲು ಕೇಳಿದ್ದರು. ಆಗ ಆ ಅಪರಿಚಿತ ವ್ಯಕ್ತಿಯು 500 ರೂಪಾಯಿ ಕೊಟ್ಟರೆ ಡ್ರಾಪ್ ಮಾಡುವುದಾಗಿ ತಿಳಿಸಿದ್ದ. ಅದರಂತೆ ಸಂತೋಷ್ ಒಪ್ಪಿ ತನ್ನ ಬೈಕನ್ನು ಆತನಿಗೆ ನೀಡಿ ಬೈಕಿನ ಹಿಂದೆ ತಾನು ಕುಳಿತುಕೊಂಡು ಸೈಬ್ರಕಟ್ಟೆಗೆ ಹೋಗಿದ್ದಾರೆ. ಬಳಿಕ ಕಾಲು ನೋವು ಹೆಚ್ಚಾದ ಕಾರಣ ಸೈಬ್ರಕಟ್ಟೆ ಬಸ್ಸು ನಿಲ್ದಾಣದಲ್ಲಿ ಹೋಗಿ ಕುಳಿತುಕೊಂಡಿದ್ದ ಸಂದರ್ಭ ಬೈಕಿನಲ್ಲಿ ಡ್ರಾಪ್ ನೀಡಿದ ವ್ಯಕ್ತಿಯು ಬೈಕ್ ಕಳವು ಮಾಡಿಕೊಂಡು ಪರಾರಿಯಾಗಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.