ಟಿನ್ ಟಾನ್ ರೆಸಾರ್ಟ್ ನಲ್ಲಿ ನೀರಿಗೆ ಬಿದ್ದು 10ರ ಬಾಲಕ ಸಾವು
ಕುಂದಾಪುರ: ಬೇಸಿಗೆ ರಜೆಗೆ ಮಜಾ ಮಾಡಲು ಹೋದ ಕುಟುಂಬವೊಂದರ ಮಗು ರೆಸಾರ್ಟಿನಲ್ಲಿ ಈಜಾಡುತ್ತಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ಟಿನ್ಟಾನ್ ರೇಸಾರ್ಟ್ ನಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ರೆಸಾರ್ಟಿನಲ್ಲಿ ಮೃತಪಟ್ಟ ಬಾಲಕನನ್ನು ಆರಿಝ್ ಉಮ್ಮರ್ ಸೌಕುರ್(10) ಎಂದು ಗುರುತಿಸಲಾಗಿದೆ.

ಉಡುಪಿಯ ಹೂಡೆ ನಿವಾಸಿಯಾಗಿರುವ ಇಬಾದುಲ್ಲಾ (50), ಅವರ ಪತ್ನಿ ಸಲ್ಮಾ, ಮಕ್ಕಳಾದ ಮಕ್ಕಳಾದ ರಿಝಾ(12), ಮೊಹಮ್ಮದ್ದ ಜಹೀರ್(11) ಹಾಗೂ ಸಲ್ಮಾ ಅವರ ತಂಗಿ ಸೀಮಾ ಮತ್ತು ಅವರ ಮಕ್ಕಳಾದ ಆರಿಝ್ ಉಮ್ಮರ್ ಸೌಕುರ್(10) ಮತ್ತು ಮೊಹಮ್ಮದ್(4), ಆಯಿಷಾ(12) ಹಾಗೂ ಅತ್ತೆ ರವರೊಂದಿಗೆ ಎಪ್ರಿಲ್ 11ರಂದು ಟಿನ್ ಟಾನ್ ರೆಸಾರ್ಟಿಗೆ ಹೋಗಿದ್ದರು. ನಂತರ ಅಲ್ಲಿಯ ವಠಾರದಲ್ಲಿ ಸಂಸಾರದೊಂದಿಗೆ ತಿರುಗಾಡಿ ಅಲ್ಲೆ ಸ್ವೀಮಿಂಗ್ ಮಾಡಿ ಬರುವಾಗ ಸೀಮಾ ಇವರ ಮಗ ಆರಿಝ್ ಉಮ್ಮರ್ ಸೌಕುರ್ ಇತರ ಮಕ್ಕಳೊಂದಿಗೆ ಆಟ ಆಡುತ್ತ ನೀರಿನಲ್ಲಿ ಬಿದ್ದಿದ್ದಾನೆ ಎನ್ನಲಾಗಿದೆ. ಬೊಬ್ಬೆ ಕೇಳಿದ ಮನೆಯವರು ಬಾಲಕನನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹಾಲಾಡಿ ದುರ್ಗಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬಾಲಕನ ಕುಟುಂಬಸ್ಥರು ಟಿನ್ಟಾನ್ ರೇಸಾರ್ಟ್ ವಿರುದ್ಧ ಾಕ್ರೋಶ್ ವ್ಯಕ್ತಪಡಿಸಿದ್ದು, ರೆಸಾರ್ಟ್ ಮಾಲಕರ ನಿರ್ಲಕ್ಷ್ಯ, ಅಜಾಗರೂಕತೆ, ಲೈಪ್ ಜಾಕೆಟ್ ಮತ್ತು ಲೈಫ್ ಗಾರ್ಡ್ ಹಾಗೂ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಬಾಲಕನ ಸಾವಿಗೆ ಕಾರಣವಾಗಿದೆ ಎಂದು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.