ನಿರುದ್ಯೋಗದ ಚಿಂತೆ : ಯುವಕ ಆತ್ಮಹತ್ಯೆ
ಕುಂದಾಪುರ: ಮೂವತ್ತೊಂದು ವರ್ಷ ಪ್ರಾಯದ ಯುವಕನೊಬ್ಬ ಉದ್ಯೋಗ ಇಲ್ಲದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಪ್ರಕರಣ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಶ್ರೀಧರ (31) ಎಂಬಾತನು ಅವಿವಾಹಿತನಾಗಿದ್ದು ಮರಕೆಲಸ ಕೆಲಸ ಮಾಡಿಕೊಂಡಿದ್ದನು. ಆದರೆ ಇತ್ತೀಚಿಗೆ ಸರಿಯಾಗಿ ಕೆಲಸ ಇಲ್ಲದ ಕಾರಣ ಮನೆಯಲ್ಲಿಯೇ ಇರುತ್ತಿದ್ದ ಎಂದು ಆತನ ಅಣ್ಣ ರಾಘವೇಂದ್ರ ದೂರಿನಲ್ಲಿ ತಿಳಿಸಿದ್ದಾನೆ. ಆದರೆ ಎಪ್ರಿಲ್ 6ರಂದು ಬೆಳಿಗ್ಗೆ ಮನೆಯವರು ಏಳುವ ಮೊದಲು ಮನೆಯಿಂದ ಎದ್ದು ಹೋಗಿದ್ದು ಮನೆಯವರೆಲ್ಲರೂ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಬಳಿಕ ಎಪ್ರಿಲ್ 11 ರಂದು 9:45 ಸಮಯಕ್ಕೆ ಬಳ್ಕೂರು ಗ್ರಾಮದ ಭಟ್ರಮಕ್ಕಿ ಎಂಬಲ್ಲಿರುವ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಮೃತ ಪಟ್ಟಿರುವುದು ಪತ್ತೆಯಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.