ಕುಂದಬಾರಂದಾಡಿಯಲ್ಲಿ ನೂತನ ಭಜನಾ ತಂಡ ಅಸ್ತಿತ್ವಕ್ಕೆ

ಕುಂದಾಪುರ: ಶ್ರೀ ಲಕ್ಷೀಚನ್ನಕೇಶವ ದೇವಸ್ಥಾನ ಮಾಣಿಕೋಳಲು ಕುಂದಬಾರಂದಾಡಿಯಲ್ಲಿ ಭಾನುವಾರ ನೂತನ ಭಜನಾ ತಂಡ ಲೋಕಾರ್ಪಣೆಗೊಂಡಿತು. ತಾಲೂಕು ಭಜನಾ ಒಕ್ಕೂಟದ ಅಧ್ಯಕ್ಷ ಜಯಕರ್ ಪೂಜಾರಿ ಗುಲ್ವಾಡಿ ಹಾಗೂ ದೇವಸ್ಥಾನದ ಆಡಳಿತ ಕಮೀಟಿಯ ಸರ್ವ ಸದಸ್ಯರ ಸಮ್ಮುಖದಲ್ಲಿ ಇಂದು ಭಜನಾ ತಂಡವನ್ನು ಉದ್ಘಾಟಿಸಲಾಯಿತು .
ಈ ಸಂದರ್ಭ ಕುಂದಾಪುರ ತಾಲೂಕು ಭಜನಾ ಒಕ್ಕೂಟದ ಕಾರ್ಯದರ್ಶಿ ಚಂದ್ರಶೇಖರ್.ಶೆಟ್ಟಿ ಶಾಂತರಾಮ್ ಮೋಗವಿರ, ಬಿದ್ಕಲ್ ಕಟ್ಟೆ ಗಣಪಯ್ಯ ಶೆಟ್ಟಿ. ದೈವಸ್ಥಾನದ ಕಾರ್ಯದರ್ಶಿ ಸತೀಶ್ ಶೆಟ್ಟಿ. ಉಪ ಕಾರ್ಯದರ್ಶಿ ವಿಶ್ವನಾಥ್ ಗಾಣಿಗ. ಚಂದ್ರಹಾಸ ಹೊಳ್ಮಗೆ, ಲಕ್ಷೀ ನಾರಾಯಣ ಹೆಬ್ಬಾರ್, ಮಂಜುನಾಥ ದೇವಾಡಿಗ, ದಿವಾಕರ್ ಆಚಾರ್ಯ, ಆನಂದ್ ಗಾಣಿಗ, ಕುಷ್ಠ ದೇವಾಡಿಗ, ಪ್ರೇಮಾ ಶ್ರೀಯಾನ್, ಸುಜಾತ, ನಾಗರತ್ನ ಹಾಗೂ ದೇವಸ್ಥಾನದ ಅರ್ಚಕ ಚಂದ್ರಶೇಖರ ಉಪಾಧ್ಯ ,ಊರಿನ ಗಣ್ಯರು ಮತ್ತು ದೇವಸ್ಥಾನದ ಆಡಳಿತ ಕಮೀಟಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.
