BlogLocal newsPoliticsState news

ಮೋದಿ ಮೂರನೇ ಅವಧಿಗೆ ವಿಕಸಿತ ಭಾರತ! – ಬಿ.ವೈ.ಆರ್.

Aware others:

ಅಂಪಾರು|ಕುಂದಾಪುರ: ಸಿದ್ದಾಪುರ ಹಾಗೂ ಕಾವ್ರಾಡಿ ಮಹಾಶಕ್ತಿ ಕೇಂದ್ರದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ”ದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹೀಗೆ ಹೇಳಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಸಿದ್ದಾಪುರ ಹಾಗೂ ಕಾವ್ರಾಡಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಂಪಾರು ಮೂಡುಬಗೆ ನಮ್ಮೂರ ಸಂಭ್ರಮ ಮೈದಾನದಲ್ಲಿ ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲ ವತಿಯಿಂದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಸ್ವಾತಂತ್ರ್ಯದ ಶತಮಾನೋತ್ಸವ ಸಂದರ್ಭದಲ್ಲಿ ದೇಶವು ವಿಕಸಿತ ಭಾರತವಾಗಬೇಕು ಮತ್ತು ಮೂರನೇ ಅವಧಿಯಲ್ಲಿ ವಿಶ್ವದ ಮೂರನೇ ಬಲಿಷ್ಠ ಆರ್ಥಿಕ ರಾಷ್ಟ್ರವಾಗಬೇಕು ಎನ್ನುವ ಪ್ರಧಾನಿ ನರೇಂದ್ರ ಮೋದಿ ಅವರ ಕನಸನ್ನು ಈ ಬಾತಿಯ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರು ಒಟ್ಟಾಗಿ ಈಡೇರಿಸಬೇಕಿದೆ ಎಂದರು. ಈ ಬಾರಿ ಪ್ರತಿಯೊಬ್ಬ ಕಾರ್ಯಕರ್ತನೂ ಕೇಂದ್ರ ಸರ್ಕಾರದ ಸಾಧನೆ ಹಾಗೂ ನನ್ನ ಅವಧಿಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳನ್ನು ಮತದಾರರ ಮುಂದಿಟ್ಟು ನಾವು ಮತಯಾಚಿಸಬೇಕು ಎಂದರು.

ಬಿ.ವೈ.ರಾಘವೇಂದ್ರ ಮಾತನಾಡುತ್ತಿರುವುದು

ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿದರು. ಮಂಡಲದ ಅಧ್ಯಕ್ಷ ದೀಪಕ್ ಶೆಟ್ಟಿ, ಪ್ರಮುಖ ಸದಾನಂದ ಉಪ್ಪಿನಕುದ್ರು, ಯಶಸ್ವಿನಿ, ಅಶೋಕ್ ಮೂರ್ತಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಶಿವರಾಜ್ ಅವರು, ಗಜೇಂದ್ರ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಸೇರಿದ ಜನಸ್ತೋಮ

ಬಿ.ವೈ.ರಾಘವೇಂದ್ರ ಮಾತನಾಡುತ್ತಿರುವುದು

Aware others:

Leave a Reply

Your email address will not be published. Required fields are marked *

error: Content is protected !!