ಸಾಲಿಗ್ರಾಮ: ಶ್ರೀ ಗುರು ನರಸಿಂಹ ದೇವಳದ ಸದಸ್ಯ ಕಾರ್ಕಡ ತಾರಾನಾಥ ಹೊಳ್ಳಗೆ ಸನ್ಮಾನ
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಜಯ ಸಾಧಿಸಿದ ಕಾರ್ಕಡ ತಾರಾನಾಥ ಹೊಳ್ಳರನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ನೇತೃತ್ವದಲ್ಲಿ ಮಂಗಳೂರಿನ ಶ್ರೀ ಶರವು ಮಹಾಗಣಪತಿ ದೇವಳದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ರಾಘವೇಂದ್ರ ಶಾಸ್ತ್ರಿಯವರು ದೇವರುಗಳ ಗಂಧ ಪ್ರಸಾದವಿತ್ತು ಗೌರವಿಸಿದರು. ಮಲ್ಲಿಕಾ ಹೊಳ್ಳ, ಜನಾರ್ದನ ಹಂದೆ, ಪ್ರಭಾಕರ ಜೋಷಿ, ನಿತ್ಯಾನಂದ ಕಾರಂತ, ಚಂದ್ರ ಶೇಖರ ಮಯ್ಯ, ಶರವು ಗಣೇಶ್, ಉಪಸ್ಥಿತರಿದ್ದರು.
