BlogEconomyEducationGovernmentHighlightsHuman storiesLifestyleLocal newsNational NewsOthersPoliticsState newsTechTop StoriesTrending

ಜನಗಣತಿದಾರರ ಆಯ್ಕೆಯಲ್ಲಿ ಅನ್ಯಾಯ – ಜಿಲ್ಲಾಡಳಿತ ಸ್ಪಂದಿಸದಿದ್ದರೆ ಕಚೇರಿ ಮುಂದೆ ಪ್ರತಿಭಟನೆ : ಬೋಜೇಗೌಡ ಎಚ್ಚರಿಕೆ

Aware others:

ಕುಂದಾಪುರ: ಸೋಮವಾರದಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಗ ಸಮೀಕ್ಷೆಗೆ ಗಣತಿದಾರರನ್ನು ಆಯ್ಕೆ ಮಾಡಲಾಗಿದ್ದು ಉಡುಪಿ ಜಿಲ್ಲೆಯಲ್ಲಿ ತಾರತಮ್ಯ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘ ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಉಡುಪಿ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.

ಶಾಲಿನಿ ರಜನೀಶ್ ಹಾಗೂ ರಶ್ಮಿ ಮಹೇಶ್ ಅವರು ಪ್ರವಢಶಾಲಾ ಶಿಕ್ಷಕರನ್ನು ಗಣತಿಯಿಂದ ಹೊರಗಿಡುವಂತೆ ಈಗಾಗಲೇ ಆದೇಶ ನೀಡಿದ್ದು, ಪ್ರೌಢಶಾಲಾ ಸಹ ಶಿಕ್ಷಕರನ್ನು ಗಣತಿ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಸ್ಪಷ್ಟವಾಗಿ ತಿಳಿಸಿದ್ದರೂ ಉಡುಪಿ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಧಿಕಾರಿಗಳು ಆದೇಶವನ್ನು ಗಾಳಿಗೆ ತೂರಿ ತಮ್ಮದೇ ಗಣತಿದಾರರ ಪಟ್ಟಿ ಸಿದ್ಧಪಡಿಸಿದ್ದಾರೆ. ಇದರಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶಗಳ ಮೇಲೆ ದುಷ್ಪರಿಣಾಮ ಬಿರಲಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆಗೆ ಮಾತನಾಡಿದ್ದು, ತಕ್ಷಣ ಜಿಲ್ಲಾಧಿಕಾರಿಗಳು ಸ್ಪಂದಿಸದೇ ಇದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರೌಢಶಾಲಾ ಸಹಶಿಕ್ಷಕರ ಜೊತೆಗೆ ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರವೂ ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದ್ದು, ಯುವನಿಧಿಯಂತಹ ಶಿಕ್ಷಿತ ನಿರುದ್ಯೋಗಿ ಯುವಕರನ್ನು ಇಂತಹಾ ಸಮೀಕ್ಷೆಗಳಲ್ಲಿ ಬಳಸಿಕೊಳ್ಳಬೇಕು. ಆಗ ಅಂತಹಾ ಯುವಕರಿಗೂ ತಾತ್ಕಾಲಿಕ ಉದ್ಯೋಗ ಸಿಗುವ ಜೊತೆಗೆ ಇಲಾಖೆಗಳ ಬಗ್ಗೆ ಜ್ಞಾನ ಮತ್ತು ಕೌಶಲ್ಯ ದೊರೆಯುತ್ತದೆ. ಸಾಕಷ್ಟು ಸಮಯಾವಕಾಶಗಳನ್ನೂ ಸಮೀಕ್ಷೆ ನಡೆಸಲು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


Aware others:

One thought on “ಜನಗಣತಿದಾರರ ಆಯ್ಕೆಯಲ್ಲಿ ಅನ್ಯಾಯ – ಜಿಲ್ಲಾಡಳಿತ ಸ್ಪಂದಿಸದಿದ್ದರೆ ಕಚೇರಿ ಮುಂದೆ ಪ್ರತಿಭಟನೆ : ಬೋಜೇಗೌಡ ಎಚ್ಚರಿಕೆ

  • Yes….Govt and Aided High school teachers and Morarji Kittur Rani chnnamma and other residential school teachers should not be taken for census

    Reply

Leave a Reply

Your email address will not be published. Required fields are marked *

error: Content is protected !!