BlogCulturalEducationEntertainmentFashionHealthHighlightsHuman storiesLifestyleLocal newsOthersState newsSuccess storiesTop StoriesTrending

ಜಿಲ್ಲಾ‌ಮಟ್ಟದ ಯೋಗ ಸ್ಪರ್ಧೆ: ಶಂಕರನಾರಾಯಣ ಠಾಣೆಯ ಹೆಡ್ ಕಾನ್ ಸ್ಟೇಬಲ್ ಗುರುದಾಸ್ ಪ್ರಥಮ

Aware others:

ಉಡುಪಿ: ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ -2025 ವಯೋಮಿತಿ 35 ರಿಂದ 45 ರ 3 ವಿಭಾಗದಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗುರುದಾಸ್ ಅವರು ಪ್ರಥಮ‌ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಉಡುಪಿಯ ಶ್ರೀ ಕೃಷ್ಣ ಮಠ, ಪರ್ಯಾಯ ಶ್ರೀ ಪುತ್ತಿಗೆ ಮಠ, ಉಡುಪಿ ಕರ್ನಾಟಕ ಯೋಗಾಸನ ಸ್ಪೋಟ್ಸ್ ಅಸೋಸಿಯೇಶನ್ (ನೊಂ.)ಬೆಂಗಳೂರು, ಪತಂಜಲಿ ಯೋಗ ಪೀಠ (ಹರಿದ್ವಾರ )ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ಶ್ರೀ ಕೃಷ್ಣ ಮಂಡಲೋತ್ಸವದ ಪ್ರಯುಕ್ತ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ಆಯೋಜಿಸಲಾಗಿತ್ತು.  

ಬೈಂದೂರಿನ ತೆಗ್ಗರ್ಸೆಯವರಾದ ಗುರುದಾಸ್ ಅವರು ಕಳೆದ 20 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ‌ ಸಲ್ಲಿಸುತ್ತಿದ್ದಾರೆ. ಕುಂದಾಪುರ ಸಂಚಾರಿ ಠಾಣೆಯಲ್ಲಿ 5 ವರ್ಷ‌ ಸೇವೆ ಸಲ್ಲಿಸಿ ಶಂಕರನಾರಾಯಣ ಠಾಣೆಗೆ ವರ್ಗಾವಣೆಗೊಂಡಿದ್ದರು.


Aware others:

Leave a Reply

Your email address will not be published. Required fields are marked *

error: Content is protected !!