ಕಾರು ಸ್ಕೂಟರ್ ಡಿಕ್ಕಿ ಸವಾರ ಗಂಭೀರ
ಕುಂದಾಪುರ: ಸ್ಕೂರ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಇಬ್ಬರು ಸವಾರರಿಗೆ ಗಾಯಗಳಾಗಿ ಆಸ್ಪತ್ರೆ ಸೇರಿದ ಘಟನೆ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಆಜ್ರಿ ಗ್ರಾಮದ ಕರ್ಮಣಿ ಹೊಳಂದೂರು ಎಂಬಲ್ಲಿ ನಡೆದಿದೆ. ಗಾಯಗೊಂಡ ಸ್ಕೂಟರ್ ಸವಾರರನ್ನು ಕೊಲ್ಲೂರು ಗ್ರಾಮದ ನಿತಿನ್ ಹಾಗೂ ನಾಗರಾಜ್ ಎಂದು ಗುರುತಿಸಲಾಗಿದೆ.

ಇಬ್ಬರು ಸ್ಕೂಟರ್ ನಲ್ಲಿ ಹಳ್ಳಿಬೇರಿನಿಂದ ಸಿದ್ದಾಪುರ ಶೊರೂಂ ಗೆ ಹೋಗುತ್ತಿದ್ದರು. ನಾಗರಾಜ್ ಬೈಕ್ ಚಲಾಯಿಸುತ್ತಿದ್ದರು. ಆಜ್ರಿ ಗ್ರಾಮದ ಕರ್ಮಣಿ ಹೊಳಂದೂರು ಎಂಬಲ್ಲಿ ಬರುತ್ತಿದ್ದಾಗ ಎದುರಿನಿಂದ ಬಂದ ಸುಧಾಕರ್ ಎಂಬುವ್ರು ಚಲಾಯಿಸುತ್ತಿದ್ದ ಓಮ್ನಿ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಅಸ್ಕೂಟರ್ ಸವಾರರಿಬ್ಬರೂ ರಸ್ತೆಗೆ ಬಿದ್ದಿದ್ದು, ಆ ಪೈಕಿ ಸುಧಾಕರ್ ಎಂಬುವರು ಗಂಭೀರ ಗಾಯಗೊಂಡರೆ ನಿತಿನ್ ತರಚಿದ ಗಾಯಗಳೊಂದಿಗೆ ಕುಮದಾಫುರದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
